ಅತ್ಯಾಚಾರದ ಆರೋಪಿ ಚರ್ಚ್ ಬಿಷಪ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ನನ್ ಗಳು | Janata news
ಕೊಚಿ : ಕೊಚ್ಚಿಯಲ್ಲಿನ ಕ್ರಿಶ್ಚಿಯನ್ ಸನ್ಯಾಸಿಗಳು ಹಾಗೂ ಸನ್ಯಾಸಿನಿಯರು(ನನ್) ಅತ್ಯಾಚಾರದ ಆರೋಪಿ ರೋಮನ್ ಕ್ಯಾಥೊಲಿಕ್ ಚರ್ಚ್ನ ಬಿಷಪ್, ಫ್ರಾಂಕೊ ಮುಲ್ಲಕ್ಕಲ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ನಗರದ ಹೈಕೋರ್ಟ್ ಜಂಕ್ಷನ್ ಬಸ್ ನಿಲ್ದಾಣದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಗೆ ಜಂಟಿ ಕ್ರಿಶ್ಚಿಯನ್ ಕೌನ್ಸಿಲ್ ಕರೆನೀಡಿದೆ. ರೋಮನ್ ಕ್ಯಾಥೋಲಿಕ್ ಚರ್ಚ್ ಬಿಷಪ್ ವಿರುದ್ಧ ದಾಖಲಿಸಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರ ನಿಷ್ಕ್ರಿಯತೆಯನ್ನು ಖಂಡಿಸಿ ಕ್ರೈಸ್ತ ಸಂನ್ಯಾಸಿನಿಯರು ಕೊಟ್ಟಾಯಂ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಶಕ್ತಿಶಾಲಿ ಕ್ಯಾಥೋಲಿಕ್ ಚರ್ಚ್ ಗಳ ವಿರೋಧ ಬಯಸದ ರಾಜ್ಯ ಸರ್ಕಾರ, ಈ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ನಿಧಾನಗತಿ ಅನುಸರಿಸುತ್ತಿದೆ, ಎಂಬ ಆರೋಪವಿದೆ. ಪ್ರಕರಣದ ತನಿಖಾ ತಂಡ ಬಿಷಪ್ ಮೇಲೆ ಕ್ರಮ ತೆಗೆದು ಕೊಳ್ಳುವುದು ಅನಿವಾರ್ಯವೆಂದು ವರದಿ ಸಲ್ಲಿಸಿ ವರ ಕಳೆದರೂ, ಪೋಲೀಸರ ಕರ್ತ್ಯವ್ಯಕ್ಕೆ ಮಾತ್ರ ಮೋಡ ಕವಿದ ಹಾಗಿದೆ, ಎಂದು ಹೇಳಲಾಗಿದೆ.
ಇಬ್ಬರು ಸನ್ಯಾಸಿಗಳು ಈ ಬಿಷಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿದ್ದರು. ಮತ್ತು ಒಬ್ಬ ಮಾಜಿ-ಸನ್ಯಾಸಿನಿ ಈ ಬಿಷಪ್ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿ ಬಹಿರಂಗ ಗೊಳಿಸಿದ್ದರು. ಬಿಷಪ್ ತನ್ನನ್ನು ಅನುಚಿತವಾಗಿ ಮುಟ್ಟಿದ ಪರಿಣಾಮವಾಗಿ ನಾನು ಚರ್ಚ್ ನಿಂದ ಹೊರಬರ ಬೇಕಾಯಿತು, ಎಂದು ಮಾಜಿ ಸನ್ಯಾಸಿ ಆರೋಪಿಸಿದ್ದರು. ಬಿಷಪ್ ನನ್ನು ಬಂಧಿಸುವವರೆಗೆ ನಾವು ನಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸುವುದಿಲ್ಲ ಎಂದು ಕೊಚ್ಚಿಯಲ್ಲಿ ನಡೆದ ಪ್ರತಿಭಟನೆಯನ್ನು ಆಯೋಜಿಸಿದ್ದ ಕೇರಳ ಚರ್ಚ್ ಸುಧಾರಣಾ ಚಳುವಳಿಯ ಕಚೇರಿ ಅಧಿಕಾರಿಗಳು ಹೇಳಿದ್ದಾರೆ.