ಶಿವಮೊಗ್ಗದಲ್ಲಿ ಬಾವಿಗೆ ಬಿದ್ದು ನರ್ಸಿಂಗ್ ವಿದ್ಯಾರ್ಥಿನಿ ಸಾವು ? | Janata news
ಶಿವಮೊಗ್ಗ : ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ, ಶಿವಮೊಗ್ಗದ ಸಾಗರ ತಾಲೂಕು ತ್ಯಾಗಾರ್ತಿ ಗ್ರಾಮದಲ್ಲಿ ನಡೆದಿದೆ.
ಅಂಜಲಿ(20) ಮೃತ ವಿದ್ಯಾರ್ಥಿನಿ. ತ್ಯಾಗಾರ್ತಿಯ ಮೇಘರಾಜ್ ಎಂಬುವರ ಮಗಳು ಅಂಜಲಿ ಎಂದು ಗುರ್ತಿಸಲಾಗಿದೆ. 19 ವರ್ಷದ ಈ ಯುವತಿ, ಸಾಗರದ ಉಳ್ಳೂರಿನ ಗಂಗೋತ್ರಿ ಕಾಲೇಜಿನಲ್ಲಿ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದರು.
ಈಕೆ ಇಂದು ಬೆಳಗ್ಗೆ ಬಾವಿ ಕಟ್ಟೆ ಮೇಲೆ ಕುಳಿತು ಓದುತ್ತಿದ್ದ ವೇಳೆ ಆಯ ತಪ್ಪಿ ಬಾವಿಗೆ ಬಿದ್ದಿದ್ದಾಳೆ ಎನ್ನಲಾಗಿದೆ.
ಸ್ಥಳಕ್ಕೆ ಸಾಗರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
RELATED TOPICS:
English summary :Shivamogga