ಸಣ್ಣನೀರಾವರಿ ಇಲಾಖೆ ಇಂಜನೀಯರ್ ಅನೈತಿಕ ಸಂಬಂಧ : ಹೆಂಡ್ತಿ ಕೈಲೇ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ! | Janata news
ಕೊಪ್ಪಳ: : ನಗರದ ಕುಷ್ಟಗಿ ಸರ್ಕಲ್ ಬಳಿಯ ಸಣ್ಣನೀರಾವರಿ ಇಲಾಖೆಯ ಅಧಿಕಾರಿ ವಿನೋದ್ ಕುಮಾರ್ ಗುಪ್ತಾ ಪರ ಸ್ತ್ರೀಯೊಂದಿಗೆ ಮನೆಯಲ್ಲಿದ್ದಾಗ ಗುಪ್ತಾಳ ಪತ್ನಿ ಹಾಗೂ ಮಕ್ಕಳು ದಾಳಿ ಮಾಡಿದ್ದಾರೆ. ಇದೇ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಬಿದ್ದ ಪರನಾರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಹಲವಾರು ವರ್ಷಗಳಿಂದ ಗುಪ್ತವಾಗಿ ಪರಸ್ತ್ರೀ ಜತೆ ಸ್ನೇಹ ಬೆಳೆಸಿಕೊಂಡಿದ್ದ ಎಕ್ಸಿಕ್ಯೂಟಿವ್ ಇಂಜಿನಿಯರ್ ಒಬ್ಬರು ಇದೀಗ ಸಿಕ್ಕಿಬಿದ್ದು ಪೇಚಿಗೆ ಸಿಲುಕಿರುವ ಘಟನೆ ನಡೆದಿದೆ.
ಮದುವೆಯಾಗಿ ಮಕ್ಕಳಿದ್ದರೂ ಗುಪ್ತಾ ಅವರು ಕೆಲ ವರ್ಷಗಳಿಂದ ಈ ಮಹಿಳೆ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಈ ಬಗ್ಗೆ ಗುಪ್ತಾ ಅವರ ಪತ್ನಿಗೆ ಸಂದೇಹ ಶುರುವಾಗಿತ್ತು.
ನಂತರ ಪತಿಗೆ ತಿಳಿಯದಂತೆ ಹಿಂಬಾಲಿಸಿದರು. ಅದೊಂದು ದಿನ ಕೊಪ್ಪಳದ ಯಶೋದ ಆಸ್ಪತ್ರೆ ಸಮೀಪದ ಕಚೇರಿ ಕಂ ಮನೆಗೆ ತಮ್ಮ ಮಕ್ಕಳ ಸಮೇತ ಎಂಟ್ರಿ ಕೊಟ್ಟಿದ್ದಾರೆ. ಅಲ್ಲಿ ಪತಿಯನ್ನು ಆ ಮಹಿಳೆ ಜತೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆ ಮಹಿಳೆಗೆ ಗೂಸಾ ನೀಡಿದ್ದಾರೆ. ಈ ಮೂಲಕ ಸಣ್ಣ ನೀರಾವರಿ ಇಲಾಖೆ ಹಿರಿಯ ಅಧಿಕಾರಿ ಕಳ್ಳಾಟ ಬಟಾ ಬಯಲು ಮಾಡಿದ್ದಾರೆ.
ಸ್ತ್ರೀ ಜೊತೆ ಇರೋದನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿರೋ ಇವರು ಆ ಮಹಿಳೆಗೆ ಗೂಸಾ ನೀಡಿದ್ದಾರೆ. ಗುಪ್ತಾಳ ಪತ್ನಿ ಹಾಗೂ ಅನೈತಿಕ ಸಂಬಂಧ ಹೊಂದಿದ ಮಹಿಳೆ ಮನೆಯೊಳಗೆ ಕೈ ಕೈ ಮಿಲಾಯಿಸಿದ್ದು, ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿವೆ.
ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ರಾಜೀ ಸಂಧಾನದ ಮಾತುಗಳು ನಡೆಯುತ್ತಿವೆ.