ಕೊಡಗಿನಲ್ಲಿ ಹುಲಿ ದಾಳಿಗೆ ಎಂಟು ವರ್ಷದ ಬಾಲಕ ಬಲಿ! | Janata news
ಕೊಡಗು : ಹುಲಿಯೊಂದಿ ದಾಳಿನ ನಡೆಸಿದ ಪರಿಣಾಮ 8 ವರ್ಷದ ಬಾಲಕ ಮೃತಪಟ್ಟಿದ್ದು, ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರು ಗ್ರಾಮದಲ್ಲಿ ಘಟನೆ ಸೋಮವಾರ ನಡೆದಿದೆ.
55 ವರ್ಷದ ಕೆಂಚ ಎಂಬ ಕಾರ್ಮಿಕ ಸಿಕೆ ಸುಬ್ಬಯ್ಯ ಅವರಿಗೆ ಸೇರಿದ್ದ ಎಸ್ಟೇಟ್ ನಲ್ಲಿ ಸಿಂಪಡಣಾ ಕಾರ್ಯದಲ್ಲಿ ನಿರತವಾಗಿದ್ದಾಗ ಈ ಘಟನೆ ನಡೆದಿದೆ.ಈ ವೇಳೆ ಕೆಂಚಯ್ಯನವರ ಮೊಮ್ಮಗ ರಾಮಸ್ವಾಮಿ(8) ಸ್ಥಳದಲ್ಲಿದ್ದು ಅಜ್ಜ ಮಾಡುತ್ತಿದ್ದ ಕೆಲಸವನ್ನು ನೋಡುತ್ತಿದ್ದನು. ಆ ವೇಳೆ ಹುಲಿ ದಾಳಿ ನಡೆದಿದ್ದು ಬಾಲಕ ರಾಮಸ್ವಾಮಿ ಸಾವನ್ನಪ್ಪಿದ್ದರೆ ಕೆಂಚ ತೀವ್ರವಾಗಿ ಗಾಯಗೊಂಡಿದ್ದಾರೆ.
ತೋಟದ ಕೆಲಸ ಮಾಡುತ್ತಿದ್ದ ಸಂದರ್ಭ ಕೂಲಿಕಾರ್ಮಿಕರ ಮೇಲೆ ಹುಲಿ ದಾಳಿ ಮಾಡಿದ್ದು, 16 ದಿನಗಳಲ್ಲಿ ಹುಲಿ ದಾಳಿಗೆ ಮೂವರು ವ್ಯಕ್ತಿಗಳು, 12 ಹಸು ಬಲಿಯಾಗಿವೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಪೊನ್ನಂಪೆಟೆ-ಕುಟ್ಟಾ ರಸ್ತೆ ಬಂದ್ ಮಾಡಿದ್ದಾರೆ. ಕಳೆದ ಎರಡು ವಾರಗಳಲ್ಲಿಯೂ ಹುಲಿಯನ್ನು ಹಿಡಿಯಲು ಸಾಧ್ಯವಾಗದ ಲಾಖೆಯ ವಿಫಲ ಪ್ರಯತ್ನಗಳ ಬಗ್ಗೆ ಅವರು ತಮ್ಮ ಸಿಟ್ಟನ್ನು ಹೊರಹಾಕಿದ್ದಾರೆ.