ಟೋಲ್ ಪ್ಲಾಜಾದಲ್ಲಿ ಗಲಾಟೆ: ಸರ್ಕಾರಿ ಅಧಿಕಾರಿಯನ್ನು ಹಿಗ್ಗಾಮುಗ್ಗ ಥಳಿಸಿದ ಗುಂಪು..! | Janata news
ಕೊಪ್ಪಳ : ಟೋಲ್ ಪಾವತಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಹಾಯಕ ಇಂಜಿನಿಯರನ್ನು ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತಾಲೂಕಿನ ಶಹಾಪೂರ ಗ್ರಾಮದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿರುವ ಟೋಲ್ ಪ್ಲಾಜಾದಲ್ಲಿ ನಡೆದಿದೆ.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಗಂಗಾವತಿ ವಿಭಾಗದ ಇಂಜಿನಿಯರ್ ಚಿದಾನಂದ ಎಂಬುವವರನ್ನು ಹಾಗೂ ಚಾಲಕನನ್ನು ಹಿಗ್ಗಾ ಮುಗ್ಗಾ ಥಳಿತಕ್ಕ ಒಳಗಾಗಿರುವವರು. ಹಿಟ್ನಾಳ್ ಟೋಲ್ ಸಿಬ್ಬಂದಿಯಿಂದಲೇ ಈ ಕೃತ್ಯ ನಡೆದಿದೆ ಎನ್ನಲಾಗಿದ್ದು,
ಚಿದಾನಂದ್ ಮತ್ತು ಅವರ ಚಾಲಕ ಗುತ್ತಿಗೆ ಆಧಾರಿತವಾಗಿರುವ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ, ಹೆದ್ದಾರಿಯಲ್ಲಿರುವ ಪ್ಲಾಜಾದ ಬಳಿ ನಾನು ಸರ್ಕಾರಿ ಅಧಿಕಾರಿ ಟೋಲ್ ಪಾವತಿ ಮಾಡುವುದಿಲ್ಲ ಎಂದು ವಾದಿಸಿದ್ದಾನೆ.
ಟೋಲ್ನಲ್ಲಿ ಕೆಲಸ ಮಾಡುತ್ತಿದ್ದ ಹಿಟ್ನಾಳ್ ಗ್ರಾಮದ ಯುವಕ ರೌಡಿಗಳ ಗ್ಯಾಂಗ್ ಕಟ್ಟಿಕೊಂಡು ಬಂದು ಅಧಿಕಾರಿಯನ್ನು ಕಾರಿನಿಂದ ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ.
ಈ ದ್ರಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಒಟ್ಟು 8 ಜನ ಪುಂಡರ ವಿರುದ್ಧ ಮುನಿರಾಬಾದ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಸ್ಥಳದಲ್ಲಿದ್ದ ಪೊಲೀಸರು ಗಲಾಟೆಯನ್ನು ನಿಯಂತ್ರಣ ಮಾಡಿ ಕೆಲವರನ್ನು ವಶಕ್ಕೆ ತೆಗೆದುಕೊಂಡಿದ್ದು, ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.