ಕೆರೆಗೆ ಈಜಲು ತೆರಳಿದ್ದ ಮೂವರು ಬಾಲಕರು ನೀರುಪಾಲು! | ಜನತಾ ನ್ಯೂಸ್
ತುಮಕೂರು : ಶಾಲೆಗೆ ರಜೆಯಿದ್ದ ಕಾರಣ ಈಜಲು ಕೆರೆಗೆ ತೆರಳಿದ್ದ ಮೂವರು ಬಾಲಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ತಿಪಟೂರು ಹೊರವಲಯದ ಮಾರನಗೆರೆಯಲ್ಲಿ ನಡೆದಿದೆ.
ತರುಣ್ (11), ದೀಪಕ್ (13), ಕೌಶಿಕ್ (13) ಮೃತ ದುರ್ದೈವಿಗಳು. ತಿಪಟೂರು ತಾಲೂಕು ಮತ್ತಿಹಳ್ಳಿ ನಿವಾಸಿ ಕೌಶಿಕ್ 8ನೇ ತರಗತಿ, ಮುದ್ದೇನಹಳ್ಳಿಯ ದೀಪಕ್ ಕೂಡಾ 8ನೇ ತರಗತಿ. ತರುಣ್ 5ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು ಎನ್ನಲಾಗಿದೆ.
ಒಬ್ಬ ಹುಡುಗ ನೀರಿನಲ್ಲಿ ಮುಳುಗುತ್ತಿರೋದನ್ನ ಕಂಡ 2 ಬಾಲಕರು ಆತನನ್ನ ರಕ್ಷಿಸಲು ತೆರಳಿದ್ದಾರೆ. ಆದರೆ ಅವರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
English summary :Tumkur