ವ್ಯಕ್ತಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ 18 ಜನರಿಗೆ ಸೋಂಕು! | ಜನತಾ ನ್ಯೂಸ್
ಬಾಗಲಕೋಟೆ : ವ್ಯಕ್ತಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ 18 ಜನರಿಗೆ ಕೊರೊನಾ ಸೋಂಕು ತಗುಲಿದೆ.
ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ರೈಲ್ವೆ ಸ್ಟೇಷನ್ ಗ್ರಾಮದಲ್ಲಿ ಮೇ 5ರಂದು ವ್ಯಕ್ತಿ ಮೃತಪಟ್ಟಿದ್ದರು. ಕೊವಿಡ್ ಶಂಕೆ ಹಿನ್ನೆಲೆ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಆದರೆ ಈಗ ವ್ಯಕ್ತಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ 18 ಜನರಿಗೆ ಕೊರೊನಾ ತಗುಲಿದೆ.
ಶಂಕ್ರಪ್ಪ ಗೌಡರ(48) ಮೇ 5 ರಂದು ಮೃತಪಟ್ಟಿದ್ದ ವ್ಯಕ್ತಿ. ಇವರ ಪೈಕಿ 10 ಮಂದಿ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದ್ದರೆ, ಎಂಟು ಮಂದಿ ಸಾಂತ್ವನ ಹೇಳಲು ಹೋಗಿದ್ದರು ಅವರಿಗೆ ಕೊವಿಡ್ ಇರುವುದು ದೃಢಪಟ್ಟಿದೆ.
ಸದ್ಯ ಮೃತನ ಕುಟುಂಬಸ್ಥರು ಹೋಮ್ ಕ್ವಾರಂಟೈನ್ ಆಗಿದ್ದು, ಸಾಂತ್ವನ ಹೇಳೋಕೆ ಬಂದ ಸಂಬಂಧಿಕರಿಗೆ ಹೋಮ್ ಐಸೊಲೇಶನ್ ಇರೋಕೆ ಸೂಚಿಸಿದ್ದಾರೆ.