ಹಾವಿನಿಂದಲೇ ಸ್ನೇಕ್ ಕ್ಯಾಚರ್ ದುರಂತ ಸಾವು! | ಜನತಾ ನ್ಯೂಸ್
ಬಾಗಲಕೋಟೆ : ಹಾವು ಕಚ್ಚಿ ಸ್ನೇಕ್ ಕ್ಯಾಚರ್ ಮೃತಪಟ್ಟಿರುವ ಘಟನೆ ಬಾಗಲಕೋಟೆ ತಾಲೂಕಿನ ಕಳಸಕೊಪ್ಪ ಗ್ರಾಮದಲ್ಲಿ ನಡೆದಿದೆ.
ಸದಾಶಿವ ಕರಣಿ(30) ಮೃತ ಸ್ನೇಕ್ ಕ್ಯಾಚರ್. ಬುಧವಾರ ರಾತ್ರಿ ಗ್ರಾಮದಲ್ಲಿ ಹಾವು ಕಾಣಿಸಿಕೊಂಡಿತ್ತು, ನಂತರ ವಿಷಯ ತಿಳಿದ ಸದಾಶಿವ ಕರಣಿ, ಅಲ್ಲಿಗೆ ತೆರಳಿ ಹಾವನ್ನು ಹಿಡಿದಿದ್ದರು.
ಹಾವನ್ನು ಹಿಡಿಯುವ ವೇಳೆ ಸದಾಶಿವ ಅವರಿಗೆ ಕಚ್ಚಿತ್ತು. ಬಳಿಕ ಸದಾಶಿವ ಅವರು ಮನೆಯಲ್ಲಿಯೇ ಗಿಡಮೂಲಿಕೆಗಳ ಔಷಧಿ ತೆಗೆದುಕೊಂಡಿದ್ದರು. ಆದರೆ ನಿನ್ನೆ ತಡರಾತ್ರಿ ಹಾವಿನ ವಿಷ ಹೆಚ್ಚಾಗಿ ಸಾವನ್ನಪ್ಪಿದ್ದಾರೆ.
ಹಾವುಗಳನ್ನು ಹಿಡಿಯೋದನ್ನೇ ಸದಾಶಿವ ಹವ್ಯಾಸ ಮಾಡಿಕೊಂಡಿದ್ದರು. ತಂದೆ, ಮಗ ಇಬ್ಬರು ಸಹ ಹಾವು ಹಿಡಿಯುತ್ತಿದ್ದರು. ಹಾವು ಹಿಡಿವಾಗ ಅನೇಕ ಸಲ ಕಚ್ಚಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದರು.
English summary :Bagalkote