ಪೈಪಿನೊಳಗೆ ಸಿಕ್ಕಿಕೊಂಡ ರೈತ, ಎರಡು ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ | ಜನತಾ ನ್ಯೂಸ್
ರಾಮನಗರ : ರೈತ ಒಂದು ಜಮೀನಿನಿಂದ ಇನ್ನೊಂದು ಜಮೀನಿಗೆ ಬೋರ್ವೆಲ್ ಪೈಪ್ ಅಳವಡಿಸಲು ಪೈಪ್ ಲೈನ್ ಒಳಗೆ ಹೋಗಿದ್ದ. ಸುಮಾರು 200 ಅಡಿ ಉದ್ದ ಇದ್ದ ಪೈಪ್ ಲೈನ್ ನಲ್ಲಿ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸಿಲುಕೊಂಡಿದ್ದ.
ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಆತನನ್ನು ರಕ್ಷಿಸುವ ಮೊದಲು ಸುಮಾರು ಎರಡು ಗಂಟೆಗಳ ಕಾಲ ಅದೇ ಪೈಪ್ಲೈನ್ ನಲ್ಲಿ ಸಿಲುಕಿದ್ದ ಘಟನೆ ರಾಮನಗರ ತಾಲ್ಲೂಕಿನ ಸಿಂಗ್ರಿಬೋವಿದೊಡ್ಡಿ ಗ್ರಾಮದಲ್ಲಿ ನಡೆದಿದೆ.
ಸುಮಾರು 200 ಅಡಿ ಉದ್ದ ಇರುವ ಪೈಪ್ ಲೈನ್ ಒಳಭಾಗದಲ್ಲಿ ರೈತ ಗೋವಿಂದರಾಜು ಎಂಬುವವರು ಸಿಲುಕಿದ್ದರು. ಸಿಂಗ್ರಿಬೋವಿದೊಡ್ಡಿ ಗ್ರಾಮದ ರೈತ ಗೋವಿಂದರಾಜು ಪೈಪ್ ಲೈನ್ ನಲ್ಲಿ ಸಿಲುಕಿದ ವ್ಯಕ್ತಿ. ಜಮೀನಿಗೆ ನೀರಿನ ಪೈಪ್ ಅಳವಡಿಸಲು ಪೈಪ್ ಲೌನ್ ಒಳಭಾಗಕ್ಕೆ ರಾಜಣ್ಣ ಹೋಗಿದ್ದರು.
ಪೈಪ್ಲೈನ್ನಿಂದ ತನ್ನ ಭೂಮಿಗೆ ನೀರಿನ ಸಂಪರ್ಕವನ್ನು ಪಡೆಯಲು, ರಾಜಣ್ಣ ಬೆಳಿಗ್ಗೆ 11 ರ ಸುಮಾರಿಗೆ ಪೈಪ್ಲೈನ್ ಪ್ರವೇಶಿಸಿ ಸುಮಾರು 200 ಅಡಿ ದಾಟಿದ್ದರು. ಮಣ್ಣಿನ ರಾಶಿಯು ಪೈಪ್ಲೈನ್ ಅನ್ನು ಮುಚ್ಚಿದ್ದರಿಂದ ಅವರು ಅದರ ಮೂಲಕ ಹಾದುಹೋಗಲು ಪ್ರಯತ್ನಿದ್ದಾರೆ. ಆಗ ಒಳಗೇ ಸಿಲುಕಿದ್ದಾರೆ.
ಈ ವೇಳೆ ಮಧ್ಯಭಾಗದಲ್ಲಿ ರೈತ ರಾಜಣ್ಣ ಸಿಲುಕಿಕೊಂಡಿದ್ದರು. ಬೈಪಾಸ್ ರಸ್ತೆಯ ಕೆಳಭಾಗದಲ್ಲಿ ಪೈಪ್ ಲೈನ್ ಆಳವಡಿಸಲಾಗಿತ್ತು. ಸತತ ಎರಡು ಗಂಟೆಗೂ ಹೆಚ್ಚು ಕಾಲ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯ ತೊಡಗಿಕೊಂಡು ರೈತ ರಾಜಣ್ಣನನ್ನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಗಂಟೆಗಳ ಕಾಲ ಮಣ್ಣಿನಲ್ಲಿ ಸಿಲುಕಿ ರೈತ ರಾಜಣ್ಣ ಪವಾಡ ಸದೃಶ್ಯದಲ್ಲಿ ಬದುಕಿಬಂದಿದ್ದಾರೆ.
ಗೋವಿಂದರಾಜು ರಾಜಣ್ಣ ಅವರ ಜಮೀನು ಬೆಂಗಳೂರು ಮತ್ತು ಮೈಸೂರು ನಡುವೆ ನಡೆಯುತ್ತಿರುವ ಎಕ್ಸ್ಪ್ರೆಸ್ ಹೆದ್ದಾರಿಯ ಭಾಗವಾಗಿ ನಿರ್ಮಿಸಲಾದ ಬೈಪಾಸ್ ರಸ್ತೆಯ ಎರಡೂ ಬದಿಗಳಲ್ಲಿದೆ. ಅಗ್ನಿಶಾಮಕ ಮತ್ತು ತುರ್ತು ಸೇವಾ ವಿಭಾಗದ ಅಧಿಕಾರಿಯೊಬ್ಬರು ರಾಜಣ್ಣನ ಭೂಮಿಗೆ ನೀರು ಸಂಪರ್ಕಿಸುವ ಪೈಪ್ಲೈನ್ಗಳನ್ನು ಹಾಕಲಾಗಿದೆ ಎಂದು ಹೇಳಿದರು.