ಯಡಿಯೂರಪ್ಪ ಬಳಿಕ ಮತ್ತೊಬ್ಬ ಭ್ರಷ್ಟ ಸಿಎಂ ಬರುತ್ತಾರೆ: ಸಿದ್ದರಾಮಯ್ಯ | ಜನತಾ ನ್ಯೂಸ್
ತುಮಕೂರು : ಸಿಎಂ ಬಿ.ಎಸ್. ಯಡಿಯೂರಪ್ಪ ಬದಲಾವಣೆ ಆಗುತ್ತಿದ್ದಾರೆ. ಆದರೆ ಯಡಿಯೂರಪ್ಪ ಬಳಿಕ ಇನ್ನೊಬ್ಬ ಭ್ರಷ್ಟ ಸಿಎಂ ಬರುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇಂತಹ ಭ್ರಷ್ಟ ಸರ್ಕಾರವನ್ನು ನಾನು ನೋಡಿಯೇ ಇಲ್ಲ. ಅಧಿಕಾರಿಗಳಿಂದ ಲಂಚ ಪಡೆದು ಪೋಸ್ಟಿಂಗ್ ಕೊಡ್ತಾರೆ. ಐಎಎಸ್, ಐಪಿಎಸ್, ಐಆರ್ಎಸ್ ಗಳಿಂದ ಲಂಚ ತೆಗೆದುಕೊಂಡು ಪೋಸ್ಟಿಂಗ್ ಕೊಡ್ತಾರೆ. ನಾನು ಇಂಥ ಭ್ರಷ್ಟ ಸರ್ಕಾರವನ್ನ ನೋಡಿಯೇ ಇಲ್ಲಾ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಹಣವೇ ಇಲ್ಲ. ಮಾತು ಎತ್ತಿದರೆ ಸಾಕು ಕೊರೊನಾ ಎಂದು ಹೇಳುತ್ತಾರೆ. ರಾಜ್ಯವನ್ನು ಉಳಿಸುವುದಕ್ಕೆ ಬಿಜೆಪಿಯನ್ನು ತೆಗೆಯಬೇಕು ಎಂದು ತುಮಕೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ತಳಮಟ್ಟ, ಬೂತ್, ವಾರ್ಡ್, ಬ್ಲಾಕ್, ರಾಜ್ಯ ಮಟ್ಟಗಳಲ್ಲಿ ಪಕ್ಷ ಶಕ್ತಿಗೊಳ್ಳಬೇಕು. ಇಂದರಿಂದ ಪಕ್ಷಕ್ಕೆ ಹೆಚ್ಚು ಅನುಕೂಲ ಆಗುತ್ತೆ ಎಂದು ಸಿದ್ದರಾಮಯ್ಯ ತಿಳಿಸಿದರು.