ಹುಕ್ಕಾ ಬಾರ್, ಅಫೀಮು ಬಗ್ಗೆ ವಾಜಪೇಯಿ ಅವರೇ ಹೇಳಿಕೊಂಡಿದ್ದಾರೆ: ಈಶ್ವರ ಖಂಡ್ರೆ | ಜನತಾ ನ್ಯೂಸ್
ರಾಯಚೂರು : ಮಾಜಿ ಪ್ರಧಾನಿ ವಾಜಪೇಯಿ ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನಮ್ಮ ನಾಯಕರು ಯಾರೂ ಸುಮ್ಮನೆ ಹೇಳಿಕೆಗಳನ್ನ ನೀಡಲ್ಲ. ಹುಕ್ಕಾ ಬಾರ್, ಅಫೀಮು ಬಗ್ಗೆ ವಾಜಪೇಯಿ ಅವರೇ ಹೇಳಿಕೊಂಡಿದ್ದಾರೆ. ಸ್ವತಃ ವಾಜಪೇಯಿ ಅವರು ಸಂದರ್ಶನವೊಂದರಲ್ಲಿ ಇತಿ-ಮಿತಿಯಲ್ಲಿ ಮಾದಕ ವಸ್ತು ತಗೋತಿದ್ದೆ ಅಂತ ತಾವೇ ಹೇಳಿದ್ದಾರೆ ಅಂತ ಈಶ್ವರ ಖಂಡ್ರೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಂ.ಟಿ.ಬಿ.ನಾಗರಾಜ್ ಅವರು ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ಹಾಗೆ ನಿರಾಣಿ ಕೂಡ ಭೇಟಿಯಾಗಿದ್ದಾರೆ. ಇನ್ನೂ ಅನೇಕರು ಪಕ್ಷದ ಸಂಪರ್ಕದಲ್ಲಿದ್ದಾರೆ. ಆದರೆ, ಎಷ್ಟು ಶಾಸಕರು ಎಂದು ಈಗಲೇ ಹೇಳಲಿಕ್ಕಾಗದು ಎಂದರು.
ಸಿಟಿ ರವಿಗೆ ಯಾವ ಚರಿತ್ರೆ, ಇತಿಹಾಸ ಇದೆ. ನೆಹರು ಇಂದಿರಾಗಾಂಧಿ ತ್ಯಾಗ ಬಲಿದಾನಗಳ ಬಗ್ಗೆ ಇವರಿಗೆ ಏನು ಗೊತ್ತಿದೆ. ಸಿ.ಟಿ ರವಿ ಅವರ ಪಾದದ ಧೂಳಿಗೂ ಸಮನಾಗಿಲ್ಲ. ಅವರ ಸೇವೆಯಷ್ಟೂ ಸಿ.ಟಿ ರವಿಗೆ ವಯಸ್ಸಾಗಿಲ್ಲ. ಯಾರ ಬಗ್ಗೆ ಸುಮ್ಮನೆ ಹೇಳಿಕೆಗಳನ್ನ ನೀಡಬಾರದು ಜನರೇ ಇವರಿಗೆ ತಕ್ಕ ಪಾಠ ಕಲಿಸಿತ್ತಾರೆ. ಪ್ರಿಯಾಂಕ್ ಖರ್ಗೆ ಸಿ.ಟಿ ರವಿ ಹೇಳಿಕೆಗಳು ಹೋಲಿಕೆ ಮಾಡುವಂತವಲ್ಲ ಅಂತ ಖಂಡ್ರೆ ಹೇಳಿದ್ದಾರೆ.
ರಾಜ್ಯದಲ್ಲಿ ಸರ್ಕಾರ ಅವಧಿ ಮುಗಿಸುವುದಿಲ್ಲ. ಮಧ್ಯಂತರ ಚುನಾಚಣೆ ಬರುವುದು ನಿಶ್ಚಿತ. ಆದರೆ, ಸರ್ಕಾರ ಪತನಗೊಂಡರೆ ನಾವು ಮಾತ್ರ ಚುನಾವಣೆಗೆ ಹೋಗುತ್ತೇವೆ. ಆ ನಿಟ್ಟಿನಲ್ಲಿ ಈಗಾಗಲೇ ಪಕ್ಷ ಸಂಘಟನೆಗೆ ಮುಂದಾಗಿದ್ದೇವೆ. ಸೆ.17ರಂದು ರಾಯಚೂರಿನಲ್ಲಿ ವಿಭಾಗೀಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯ ಉಸ್ತುವಾರಿ ಸುರ್ಜೆವಾಲಾ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿ ಅನೇಕ ನಾಯಕರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಧ್ವನಿ ಹತ್ತಿಕ್ಕುವ ಕೆಲಸ ಮಾಡುತ್ತಿವೆ. ಸರ್ಕಾರಗಳ ದುರಾಡಳಿತ ವಿರುದ್ದ ಧ್ವನಿ ಎತ್ತಿ ಜನರ ಪರ ಹೋರಾಟ ಮಾಡುತ್ತೇವೆ ಅಂತ ಈಶ್ವರ ಖಂಡ್ರೆ ಹೇಳಿದ್ದಾರೆ.