ನಿಂತಿದ್ದ ಲಾರಿಗೆ ಸ್ಕೂಟಿ ಢಿಕ್ಕಿ, ಸವಾರ ಬಲಿ! | ಜನತಾ ನ್ಯೂಸ್
ಕಾಪು : ಲಾರಿಗೆ ಸ್ಕೂಟರ್ ಢಿಕ್ಕಿಯಾಗಿ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಉಚ್ಚಿಲ ಸಮೀಪದ ಮೂಳೂರಿನಲ್ಲಿ ಸಂಭವಿಸಿದೆ.
ಮೃತರನ್ನು ಪಡುಬಿದ್ರೆ ನಿವಾಸಿ ಚರಣ್ ಶೆಟ್ಟಿ ಎಂದು ಗುರುತಿಸಲಾಗಿದೆ. ಉಡುಪಿಯಿಂದ ಮಂಗಳೂರಿನತ್ತ ತೆರಳುತ್ತಿದ್ದ ಸ್ಕೂಟಿ ಮೂಳೂರು ಬಳಿ ನಿಲ್ಲಿಸಲಾಗಿದ್ದ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದ್ದು, ಢಿಕ್ಕಿಯ ರಭಸಕ್ಕೆ ಸ್ಕೂಟಿ ಸಂಪೂರ್ಣವಾಗಿ ಲಾರಿಯ ಅಡಿ ಭಾಗಕ್ಕೆ ನುಗ್ಗಿದೆ.
ಸ್ಕೂಟಿ ಸವಾರನ ತಲೆಗೆ ಗಂಭೀರ ಏಟಾಗಿದ್ದು, ಸ್ಥಳೀಯರು ಸಾಹಸ ಪಟ್ಟು ಗಾಯಾಳುವನ್ನು ಹೊರಕ್ಕೆ ತೆಗೆದಿದ್ದಾರೆ.ಸವಾರ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
RELATED TOPICS:
English summary :Udupi