ಪತಿ ಜೈಲು ಸೇರುತ್ತಿದ್ದಂತೆ ಮತ್ತೋಬ್ಬನ ಪ್ರೀತಿಯಲ್ಲಿ ಬಿದ್ದ ಹೆಂಡತಿ ಕತ್ತು ಕೂಯ್ದು ಕೊಲೆ! | ಜನತಾ ನ್ಯೂಸ್
ಮಂಡ್ಯ : ಪತಿ ಜೈಲು ಸೇರುತ್ತಿದ್ದಂತೆ ಮತ್ತೋಬ್ಬನ ಜೊತೆ ಆಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಹೆಂಡತಿಯ ಕುತ್ತಿಗೆ ಕುಯ್ದು ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಕಲ್ಲುವೀರನಹಳ್ಳಿ ಗ್ರಾಮದಲ್ಲಿ.
ರಾಣಿ ಮೃತಳಾಡಾ ಹೆಂಡತಿ. ಆಕೆಯ ಪತಿ ಶಿವರಾಜ್ ಅಲಿಯಾಸ್ ಪಿಚ್ಚಾ ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.
ಶಿವರಾಜ್ ಅಲಿಯಾಸ್ ಪಿಚ್ಚಾ ಕಳೆದ 20 ವರ್ಷಗಳ ಹಿಂದೆ ಈತ ತನ್ನ ಸ್ವಂತ ಅಕ್ಕನ ಮಗಳಾದ ರಾಣಿಯನ್ನ ಮನಸಾರೆ ಇಷ್ಟಪಟ್ಟು ಮದುವೆಯಾಗಿದ್ದ. ಈತ ಮತ್ತು ಈತನ ಪತ್ನಿ ರಾಣಿ ಕೂಲಿ ಕೆಲಸ ಮಾಡುತಿದ್ದರು.
ಕೂಲಿ ಕೆಲಸ ಮಾಡಿಕೊಂಡಿದ್ದ ಶಿವರಾಜ ಅದೊಂದು ದಿನ ಹಣದ ಆಸೆಗೆ ಬಿದ್ದು ತನ್ನ ಇಬ್ಬರು ಸಂಬಂಧಿಕರ ಜೊತೆ ಸೇರಿ ಕಳೆದ 12 ವರ್ಷಗಳ ಹಿಂದೆ ಕನಕಪುರ ತಾಲೂಕಿನ ಹಾರೋಹಳ್ಳಿಯ ಅರ್ಚಕರೊಬ್ಬರ ಹತ್ಯೆ ಮಾಡಿ, ಅಲ್ಲಿ ದರೊಡೆ ನಡೆಸಿದ್ದ ಚಿನ್ನಾಭರಣಗಳನ್ನು ತನ್ನ ಮನೆಯ ಒಳಗೆ ಹಾಗೂ ಒಂದಷ್ಟು ಚಿನ್ನಾಭರಣಗಳನ್ನ ಮನೆಯ ಹಿತ್ತಲಿನಲ್ಲಿ ಬಚ್ಚಿಟ್ಟಿದ್ದ.
4 ವರ್ಷದ ಮಗ ಯೋಗೇಶ್ ಅದನ್ನು ನೋಡಿ, ಪೊಲೀಸರಿಗೆ ತೋರಿಸಿಕೊಟ್ಟಿದ್ದ. ಇದರಿಂದ ಕಳೆದ ಹತ್ತು ವರ್ಷಗಳ ಕಾಲ ಜೈಲು ಪಾಲಾಗಿದ್ದ ಶಿವರಾಜ ಏಳೆಂಟು ತಿಂಗಳ ಹಿಂದಷ್ಟೇ ಬಿಡುಗಡೆಯಾಗಿ ತನ್ನ ಗ್ರಾಮವಾದ ಕಲ್ಲುವೀರನಹಳ್ಳಿಗೆ ವಾಪಸ್ಸಾಗಿದ್ದ.
ಈ ಸಂದರ್ಭ ತನ್ನ ಹೆಂಡತಿ ರಾಣಿ ಎಲ್ಲಿ ಅಂತ ತನ್ನ ತಾಯಿ ಪಾಪಮ್ಮಳನ್ನ ವಿಚಾರಿಸಿದ್ದ. ರಾಣಿ ಬಗ್ಗೆ ಮಾಹಿತಿ ನೀಡಿದ ಪಾಪಮ್ಮ ರಾಣಿ ಈಗ ಬೆಂಗಳೂರಿನಲ್ಲಿ ಇದ್ದಾಳೆ. ನೀನು ಜೈಲಿಗೆ ಹೋದ ಬಳಿಕ ಅವಳು ಕೂಡ ಬೆಂಗಳೂರಿಗೆ ಹೋಗಿದ್ದಾಳೆ ಎಂದು ತಿಳಿಸಿದ್ದಾರೆ.
ರಾಣಿಗೆ ಬೇರೊಬ್ಬ ಗಂಡಸಿನ ಜೊತೆ ಸ್ನೇಹ ಬೆಳೆದು 8 ತಿಂಗಳ ತುಂಬು ಗರ್ಭಿಣಿಯಾಗಿದ್ದಳು. ಗರ್ಭಿಣಿಯಾಗಿದ್ದರೂ ಕೂಡ ನನಗೆ ನನ್ನ ಹೆಂಡತಿ ರಾಣಿ ಬೇಕೆ ಬೇಕು ಅಂತ ಹೇಳಿದ ಶಿವರಾಜ ಮಗುವಾಗೋವರೆಗೂ ಸುಮ್ಮನಾಗಿದ್ದ ಬಳಿಕ ಮಗುವಾಗ್ತಿದ್ದಂತೆ. ಸ್ವಲ್ಪ ದಿನ ಕಳೆಯಿತ್ತಿದ್ದಾಗೆ ಆ ಮಗುವನ್ನ ಬೇರೊಬ್ಬರಿಗೆ ಕೊಡಿಸಿ. ರಾಣಿಯ ಮನವೊಲಿಸಿ ಮತ್ತೆ ಕಲ್ಲುವೀರನಹಳ್ಳಿ ಗ್ರಾಮಕ್ಕೆ ಕರೆ ತಂದು ಶಿವರಾಜ ಗ್ರಾಮದಲ್ಲಿ ತನ್ನ ಪತ್ನಿ ಜೊತೆ ಸಂಸಾರ ನಡೆಸಿದ್ದ.
ರಾಣಿಯನ್ನ ಮತ್ತೆ ಮನೆಗೆ ಕರೆತಂದಿದ್ದ ಶಿವರಾಜ ತನ್ನ ಪತ್ನಿ ಜೊತೆ ಪ್ರತಿ ದಿನ ರಾಣಿ ಮತ್ತು ಆಕೆಯ ಪ್ರಿಯಕರನ ವಿಚಾರವಾಗಿ ಕ್ಯಾತೆ ಆರಂಭಿಸಿದ್ದ. ಇಬ್ಬರ ನಡುವೆ ಆಗಾಗ್ಗೆ ಗಲಾಟೆ ಕೂಡ ನಡಿತಿತ್ತು. ಇ ವಿಚಾರವಾಗಿ ಕೊಪಗೊಂಡಿದ್ದ ಶಿವರಾಜ ಮೊನ್ನೆ ರಾತ್ರಿ ರಾಣಿ ಮಲಗಿದ್ದಾಗ ಆಕೆಯ ಕತ್ತನ್ನ ಸೀಳಿಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ.. ಸದ್ಯ ಈ ಬಗ್ಗೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.