ಹಿಂದೂಗಳು ಹೆಚ್ಚಾಗಿರುವ ತನಕ ಮಾತ್ರ ಸಂವಿಧಾನ ಉಳಿಯುತ್ತದೆ: ಸಿ ಟಿ ರವಿ | ಜನತಾ ನ್ಯೂಸ್
ಕಲಬುರಗಿ : ಹಿಂದೂಗಳು ಹೆಚ್ಚಾಗಿರುವವರೆಗೆ ಮಾತ್ರ ಸಂವಿಧಾನ ಉಳಿಯುತ್ತದೆ. ಹಿಂದೂಗಳು ಅಲ್ಪಸಂಖ್ಯಾತರಾದ್ರೆ ಗಾಂಧಾರ ಕಾಲದ ಸ್ಥಿತಿ ಬರುತ್ತದೆ. ಸಂವಿಧಾನ ಉಳಿಸಬೇಕೆನ್ನುವವರು ಈ ಸತ್ಯ ಮರೆಯಬಾರದು ಎಂದು ಕಲಬುರಗಿ ನಗರದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ಕಲಬುರಗಿಯಲ್ಲಿ ಮಾತನಾಡಿದ ಸಿ. ಟಿ. ರವಿ, "ತಾಲಿಬಾನಿಗಳನ್ನು ಕಲಬುರಗಿಯ ಜನರು ಒಪ್ಪಿಕೊಳ್ಳುವುದಿಲ್ಲ" ಎಂದು ಹೇಳಿದರು.
ಕಲಬುರಗಿ ಮಹಾನಗರ ಪಾಲಿಕೆಯ 55 ವಾರ್ಡ್ಗಳಿಗೆ ಸೆಪ್ಟೆಂಬರ್ 3ರ ಶುಕ್ರವಾರ ಚುನಾವಣೆ ನಡೆಯಲಿದೆ. ಮಹಾನಗರ ಪಾಲಿಕೆ ಚುನಾವಣೆಗೆ ಎಐಎಂಐಎಂ ಬೆಂಬಲಿತ ಅಭ್ಯರ್ಥಿಗಳು ಸಹ ನಾಮಪತ್ರ ಸಲ್ಲಿಸಿದ್ದಾರೆ.
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕಲಬುರಗಿಯಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದ್ದರು. ಮಂಗಳವಾರ ಈ ಕುರಿತು ಸಿ. ಟಿ. ರವಿಯನ್ನು ಮಾಧ್ಯಮಗಳು ಪ್ರಶ್ನೆ ಮಾಡಿದಾಗ "ಎಐಎಂಐಎಂ ಕರ್ನಾಟಕದ ತಾಲಿಬಾನಿಗಳು" ಎಂದು ಸಿ. ಟಿ. ರವಿ ಹೇಳಿಕೆ ಕೊಟ್ಟರು.
ನಮ್ಮ ಮೂಲ ನಂಬಿಕೆಯಲ್ಲಿಯೇ ಸಮಭಾವ ಇದೆ. ಸಮಭಾವ ಹೊಂದಿರುವ ಜನರು ಬಹುಸಂಖ್ಯಾತರಾಗಿದ್ದಾಗ ಸಮಾನತೆ ಸೃಷ್ಟಿಯಾಗುತ್ತದೆ. ಇಲ್ಲದಿದ್ದರೆ ಅಫ್ಘಾನಿಸ್ತಾದ ಪರಿಸ್ಥಿತಿ ನಮಗೂ ಬರುತ್ತದೆ. ಡಿಕೆ ಸಹೋದರರಿಂದ ಬುದ್ಧನ ಮೂರ್ತಿಗಳು ಹಾಳಾಗುತ್ತದೆ.
ಓಲೈಕೆ ರಾಜಕಾರಣದಿಂದ ಇನ್ನಷ್ಟು ಪಾಕಿಸ್ತಾನ ಸೃಷ್ಟಿಯಾಗುತ್ತದೆ. ದೇಶ ಮೊದಲು ಅನ್ನೋ ತತ್ವದ ಮೇಲೆ ರಾಜಕಾರಣ ಮಾಡಿ. ಆದರೆ ಕಾಂಗ್ರೆಸ್ ಪಕ್ಷ ಮೊದಲು ಅನ್ನೋ ತತ್ವ ಮರೆತಿದೆ ಎಂದು ಸಿ. ಟಿ. ರವಿ ವಾಗ್ದಾಳಿ ನಡೆಸಿದ್ದರು.