ಅಣ್ಣ ನೇಣಿಗೆ ಶರಣು, ಸುದ್ದಿ ತಿಳಿದು ತಮ್ಮ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ! | ಜನತಾ ನ್ಯೂಸ್
ಮೈಸೂರು : ಅಣ್ಣ-ತಮ್ಮಂದಿರು ಆತ್ಮಹತ್ಯೆ ಮಾಡಿಕೊಂಡಿರುವ ಮನ ಕಲಕುವ ಘಟನೆ ಹೆಚ್ಡಿಕೋಟೆ ತಾಲೂಕಿನ ಕಟ್ಟೆಮನಗನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಿದ್ದರಾಜು (22) ಹಾಗೂ ನಾಗರಾಜು (20) ಆತ್ಮಹತ್ಯೆ ಮಾಡಿಕೊಂಡಿರುವ ಸಹೋದರರು. ಅಣ್ಣ ಸಿದ್ದರಾಜು ಮನೆಯಲ್ಲಿ ನೇಣಿಗೆ ಶರಣಾದರೆ, ಅಣ್ಣನ ಸಾವಿನ ಸುದ್ದಿ ತಿಳಿದು ಕ್ರಿಮಿನಾಶಕ ಸೇವಿಸಿ ತಮ್ಮ ನಾಗರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಗರಾಜುನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾನೆ.
ಸಿದ್ದರಾಜು ಮತ್ತು ರತ್ನಮ್ಮ ದಂಪತಿಯ ಇಬ್ಬರು ಮಕ್ಕಳು. ಸಿದ್ದರಾಜು ಕೂಲಿ ಕಾರ್ಮಿಕನಾಗಿದ್ದರೆ, ನಾಗರಾಜು ಪದವಿ ವಿದ್ಯಾಭ್ಯಾಸ ಮಾಡಿದ್ದ.ಇವರಿಗೆ ಜಮೀನು ಹಾಗೂ ಸ್ವಂತ ಮನೆ ಇಲ್ಲದೆ ಕುಟುಂಬ ಸಮೇತವಾಗಿ ಕೆಲಸ ಸಿಕ್ಕಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ನಾಗರಾಜು ಪದವಿ ಮುಗಿಸಿ ಕೆಲಸಕ್ಕಾಗಿ ಅಲೆದಾಡಿದರೂ ಕೆಲಸ ಸಿಕ್ಕಿರಲಿಲ್ಲ. ಎಚ್.ಡಿ. ಕೋಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ