ಕಾಂಗ್ರೆಸ್ ಗುಲಾಮಗಿರಿ ಪಕ್ಷ, ನಮ್ಮದು ದೇಶಭಕ್ತರ ಪಕ್ಷ - ಸಿಎಂ ಬೊಮ್ಮಾಯಿ | ಜನತಾ ನ್ಯೂಸ್
ಹುಬ್ಬಳ್ಳಿ : ಅದು ಗುಲಾಮಗಿರಿ ಪಾರ್ಟಿ(ಕಾಂಗ್ರೆಸ್) ಅವರು ದೇಶಭಕ್ತಿ ಎನ್ನು ಕೂಡ ಅದೇ ರೀತಿ ಕಾಣುತ್ತಾರೆ. ನಮ್ಮದು ದೇಶಭಕ್ತಿ ಪಾರ್ಟಿ, ಅವರದು ಗುಲಾಮಗಿರಿ ಪಾರ್ಟಿ, ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಭಾರತವನ್ನು ಅಂತ ರಾಷ್ಟ್ರಮಟ್ಟದಲ್ಲಿ ವಯ್ಯುವ ಅವಕಾಶವನ್ನು ಅವರ ಕಾಲದಲ್ಲಿ ಹೊಸಕಿ ಹಾಕಿದ್ದರು. ಈಗ ನಮ್ಮವರು ನರೇಂದ್ರಮೋದಿಯವರು ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನು ತರುವ ನಿಟ್ಟಿನಲ್ಲಿ ನಮ್ಮ ಮಕ್ಕಳನ್ನು 21ನೇ ಶತಮಾನದ ಜ್ಞಾನದ ಯುಗಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಗ್ರಾಮೀಣ ಮಕ್ಕಳನ್ನು ಸಹ ಶಿಕ್ಷಣ ನೀತಿಯಲ್ಲಿ ತರುತ್ತಿದ್ದಾರೆ. ಅದರಲ್ಲೂ ಕೂಡ ಅವರು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ, ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಹಾಗೆಯೇ, ಸಿದ್ದರಾಮಯ್ಯನವರು ನಿನ್ನೆ ಮಾತಾಡಿದ್ದನ್ನು ನೋಡಿದರೆ ತುಂಬ ಹತಾಶರಾಗಿ ಇದ್ದಂತೆ ಕಂಡುಬಂದಿದೆ ಅವರು ಒಬ್ಬ ಮಾಜಿ ಮುಖ್ಯಮಂತ್ರಿಗಳು ಅವರು ಮಾತನಾಡುವ ರೀತಿ ಅವರ ಹಿಂದೆ ಉಳಿಸಿಕೊಂಡ ಜವಾಬ್ದಾರಿಗೆ ತಕ್ಕುದಾಗಿಲ್ಲ. ಎಂದು ಹೇಳುತ್ತೇನೆ, ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಇದಕ್ಕೂ ಮೊದಲು ಹುಬ್ಬಳ್ಳಿಯ ಬಿ.ವಿ.ಭೂಮರಡ್ಡಿ ಇಂಜಿನಿಯರಿಂಗ್ ಕಾಲೇಜಿನ ಕೆಎಲ್ಇ ಟೆಕ್ ಪಾರ್ಕ್ ಉದ್ಘಾಟಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಬೊಮ್ಮಾಯಿ ಅವರು, ರಾಜಕೀಯವೂ ಒಂದು ವಿಜ್ಞಾನವೇ ಆಗಿದೆ. ಅಲ್ಲಿಯೂ ವೈಜ್ಞಾನಿಕ ವಿಧಾನಗಳಿವೆ. ತಾಂತ್ರಿಕ ಹಾಗೂ ವೈಜ್ಞಾನಿಕ ಸಂಶೋಧನೆಗಳನ್ನು ರಾಜತಾಂತ್ರಿಕವಾಗಿ ಬಳಸುವುದು ರಾಜಕೀಯ ವಿಜ್ಞಾನವಾಗಿದೆ, ಎಂದಿದ್ದಾರೆ.
ದೇಶದ ಬಡತನ, ಆರೋಗ್ಯ, ಶಿಕ್ಷಣ, ಆರ್ಥಿಕ ಸವಾಲುಗಳನ್ನು ಅರಿಯಲು ನಾವು ಸದಾ ಕಾಲ ಜನರ ನಡುವೆ ಇರಬೇಕು, ಅದೇ ಜನರ, ಜನಪರ ರಾಜಕೀಯವಾಗಿದೆ. ಪ್ರಧಾನಮಂತ್ರಿಗಳು ಸಕ್ಕರೆ ಕಾರ್ಖಾನೆಗಳಲ್ಲಿ ಇಥೆನಾಲ್ ಉತ್ಪಾದನೆಗೆ ಶೇ. 20 ರಷ್ಟು ಅವಕಾಶ ನೀಡಿದ್ದಾರೆ. ಮುರುಗೇಶ್ ನಿರಾಣಿ ಅವರ ಇದರ ಸದುಪಯೋಗ ಪಡೆದವರಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಮುಖ್ಯಮಂತ್ರಿ ತಿಳಿಸಿದರು.