ಸಿದ್ಧರಾಮಯ್ಯ ಹಸಿ ಸುಳ್ಳುಗಾರ, ಹಿಂದುಳಿದ ವರ್ಗದ ಹೀರೋ ಆಗೋಕೆ ಹೊರಟಿದ್ದಾರೆ! | ಜನತಾ ನ್ಯೂಸ್
ಹುಬ್ಬಳ್ಳಿ : ಮಾಜಿ ಸಿಎಂ ಸಿದ್ಧರಾಮಯ್ಯ ಹಸಿ ಸುಳ್ಳುಗಾರ, ಸುಳ್ಳು ಹೇಳೋದರಲ್ಲಿ ನಿಸ್ಸೀಮ ಎಂದು ಸಿದ್ಧರಾಮಯ್ಯ ವಿರುದ್ಧ ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
2013ರಲ್ಲಿ ಹಿಂದುಗಳಿದ ವರ್ಗಗಳ ಜಾತಿಗಣತಿಗೆ ಆದೇಶಿಸಿದರು. 1931ರ ನಂತರ ಮೊದಲ ಬಾರಿಗೆ ಜಾತಿ ಗಣತಿ ಎಂದು ಬಿಂಬಿಸಿಕೊಂಡಿದ್ದರು. 2015 ರಲ್ಲಿ ವರದಿ ಸಿದ್ದವಾಯಿತು. ಆದರೆ ಆಯೋಗದಿಂದ ವರದಿಯನ್ನು ಸರಕಾರ ಪಡೆಯಲಿಲ್ಲ. ಬಿಡುಗಡೆಗೆ ತಮ್ಮ ಪಕ್ಷದಲ್ಲಿ ಸಾಕಷ್ಟು ವಿರೋಧಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಿಲ್ಲ.
ಹಿಂದೆ ಸಮ್ಮಿಶ್ರ ಸರಕಾರದ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಒತ್ತಾಯ ಮಾಡಲಿಲ್ಲ. ಇದೀಗ ಟ್ವೀಟ್ಗಳ ಮೂಲಕ ಹಿಂದುಗಳಿದ ವರ್ಗಗಳ ಬಗ್ಗೆ ಡೋಂಗಿ ಕಾಳಜಿ ತೋರುತ್ತಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ಚಂದ್ರು ಅವರ ಮೂಲಕ ಪಿಐಎಲ್ ಹಾಕಿಸಿದ್ದು, ಅದರಲ್ಲಿ 2015 ರಲ್ಲಿ ಪೂರ್ಣಗೊಂಡ ವರದಿ ಬಿಡುಗಡೆ ಆದೇಶ ಮಾಡುವಂತೆ ಕೋರ್ಟ್ನ್ನು ಕೋರಿದ್ದಾರೆ. ಸುಳ್ಳುಗಳನ್ನು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರಾಗಿದ್ದಾರೆ ಎಂದರು.
ಇಷ್ಟಾದರೂ ಜಾತಿ ಗಣತಿ ವರದಿಯನ್ನು ಸಿದ್ದರಾಮಯ್ಯ ಏಕೆ ಅಂಗೀಕರಿಸಲಿಲ್ಲ ಎಂದು ಶೆಟ್ಟರ್ ಮುಖ್ಯಮಂತ್ರಿ ಚಂದ್ರು ರಿಟ್ ಅರ್ಜಿಯ ದಾಖಲೆ ಬಿಡುಗಡೆ ಮಾಡಿದರು. ಕುಮಾರಸ್ವಾಮಿ ಸಿಎಂ ಆಗಿದ್ದಾಗಲಾದ್ರೂ ಅಂಗೀಕರಿಸಬೇಕಿತ್ತು. ಆ ವೇಳೆಯಲ್ಲಿ ಕಾಂಗ್ರೆಸ್ ಪಕ್ಷದವರೇ ಜೆಡಿಎಸ್ ಗೆ ಬೆಂಬಲ ನೀಡಿದ್ದರು. ಸರ್ಕಾರ ಇವರದೇ ಇದ್ದಾಗ ಏನೂ ಮಾಡದೆ, ನಮ್ಮ ಸರ್ಕಾರ ಬಂದಾಗ ಕೇಳೋದ್ಯಾಕೆ. ಬೀದಿಗಿಳಿದ ಹೋರಾಟ ಮಾಡಲು ಹೊರಟಿರೋದ್ಯಾಕೆ. ಈಗ ಹಿಂದುಳಿದ ವರ್ಗದ ಚಾಂಪಿಯನ್ ಆಗೋಕೆ ಹೊರಟಿದ್ಯಾಕೆ ಎಂದು ಸಿದ್ಧರಾಮಯ್ಯಗೆ ಶೆಟ್ಟರ್ ಪ್ರಶ್ನಿಸಿದ್ದಾರೆ.