ಪ್ರಸಿದ್ಧ ಮಹದೇಶ್ವರನ ಹುಂಡಿಯಲ್ಲಿ 2.62 ಕೋಟಿ ರೂ. ಸಂಗ್ರಹ | ಜನತಾ ನ್ಯೂಸ್
ಚಾಮರಾಜನಗರ : ಮಹದೇಶ್ವರ ಸ್ವಾಮಿ ದೇವಾಲಯದ ಹುಂಡಿ ಹಣ ಎಣಿಕೆ ಕಾರ್ಯ ಗುರುವಾರ ನಡೆದಿದ್ದು, ₹2.62 ಕೋಟಿ ನಗದು ಸಂಗ್ರಹವಾಗಿದೆ.
71 ದಿನಗಳ ಬಳಿಕ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಈ ಪೈಕಿ 14 ದಿನಗಳು ಕೋವಿಡ್ ಕಾರಣಕ್ಕೆ ದೇವಾಲಯಕ್ಕೆ ಭಕ್ತರ ಪ್ರವೇಶ ಇರಲಿಲ್ಲ, 57 ದಿನಗಳಲ್ಲಿ 2,62,76,718 ರೂ., 170 ಗ್ರಾಂ ಚಿನ್ನ, 3.7 ಕೆ.ಜಿ ಬೆಳ್ಳಿ ಸಂಗ್ರಹ ವಾಗಲಿದೆ.
ಸಿಸಿ ಕ್ಯಾಮರಾ ಕಣ್ಗಾವಲು ಹಾಗೂ ಪೊಲೀಸ್ ಬಂದೋಬಸ್ತ್ ನಲ್ಲಿ ನಡೆದ ಎಣಿಕೆ ಕಾರ್ಯದಲ್ಲಿ ಕಳೆದ 57 ದಿನಗಳಲ್ಲಿ ಹುಂಡಿಯಲ್ಲಿ ಸಂಗ್ರಹವಾದ ಹಣದ ಮೊತ್ತ ಲೆಕ್ಕ ಹಾಕಲಾಗಿದ್ದು, 2,62,76,718 ಕೋಟಿ ರೂ. ಸಂಗ್ರಹವಾಗಿದೆ.
RELATED TOPICS:
English summary :Chamarajanagar