Thu,Mar19,2026
ಕನ್ನಡ / English

ಲೈಂಗಿಕ ಸಂಪರ್ಕಕ್ಕೆ ಒಪ್ಪದಿದ್ದಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪಾಪಿ! | ಜನತಾ ನ್ಯೂಸ್

04 Oct 2021

ಯಾದಗಿರಿ : ಲೈಂಗಿಕ ಸಂಪರ್ಕಕ್ಕೆ ವಿರೋಧಿಸಿದ್ದಕ್ಕೆ ವ್ಯಕ್ತಿಯೊಬ್ಬ ಗೃಹಿಣಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಾರಣ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾಳೆ.

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚೌಡೇಶ್ವರಿಹಾಳ ಗ್ರಾಮದಲ್ಲಿ ಮಧ್ಯರಾತ್ರಿ ವಿವಾಹಿತ ಮಹಿಳೆ ಬಾಲಮ್ಮ ತೀವ್ರ ಗಾಯಗೊಂಡಿದ್ದು, ಸೋಮವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಗ್ರಾಮದ ಬಾಲಮ್ಮ ಎನ್ನುವ ಮಹಿಳೆ ಮೇಲೆ ಅತ್ಯಾಚಾರಕ್ಕೆ ಅದೇ ಗ್ರಾಮದ ಗಂಗಪ್ಪ ಎನ್ನುವ ಯುವಕ ಯತ್ನಿಸಿದ್ದಾನೆ. ಟ್ರಾಕ್ಟರ್ ಚಾಲಕನಾಗಿರುವ ಗಂಗಪ್ಪ, ನಿನ್ನೆ ತಡರಾತ್ರಿ ಬಾಲಮ್ಮಳ ಮನೆಗೆ ನುಗ್ಗಿ, ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಗ್ರಾಮದ ಆರೋಪಿ ಗಂಗಪ್ಪ ಹಲವು ದಿನಗಳಿಂದ ಅಕ್ರಮ ಸಂಬಂಧಕ್ಕಾಗಿ ಮಹಿಳೆ ಮೇಲೆ ಹಿಂದೆ ಬಿದ್ದಿದ್ದ. ಆದರೆ ಈತನ ಮಾತಿಗೆ ಒಪ್ಪದ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳಲು ತಡರಾತ್ರಿ ಗಂಡ ಇಲ್ಲದ ಸಮಯದಲ್ಲಿ ಮತ್ತೆ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಈ ವೇಳೆ ಆಕೆಯ ಮೇಲೆ ಪೈಶಾಚಿಕ ಕೃತ್ಯ ಮೆರೆದಿದ್ದಾನೆ.

ಹೊರಗಡೆ ನಿಲ್ಲಿಸಿದ್ದ ಬೈಕ್ ನಿಂದ ಪೆಟ್ರೋಲ್ ತಂದು ಮಹಿಳೆಯ ಮೇಲೆ ಹಾಕಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಸುರಪುರ ತಾಲೂಕು ಆಸ್ಪತ್ರೆಯಲ್ಲಿ, ಚಿಕಿತ್ಸೆ ನೀಡಿದ ಬಳಿಕ ಮಹಿಳೆಯನ್ನ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದ್ರೆ ಮಹಿಳೆಗೆ ಚಿಕಿತ್ಸೆ ಫಲಕಾರುಯಾಗದೆ ಕಲಬುರಗಿ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.

ಸುರಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

RELATED TOPICS:
English summary :Yadagiri

ಗುಪ್ತಚರ ಮೌಲ್ಯಮಾಪನದಲ್ಲಿ ಪಾಕಿಸ್ತಾನ ಸಂಭಾವ್ಯ ಪರಮಾಣು ಬೆದರಿಕೆ ಎಂದ ಅಮೆರಿಕ
ಗುಪ್ತಚರ ಮೌಲ್ಯಮಾಪನದಲ್ಲಿ ಪಾಕಿಸ್ತಾನ ಸಂಭಾವ್ಯ ಪರಮಾಣು ಬೆದರಿಕೆ ಎಂದ ಅಮೆರಿಕ
ಕೋಗಿಲುವಿನಲ್ಲಿ ಬಾಂಗ್ಲಾದೇಶಿಗಳಿಗೆ ಭೂಮಿ ಮಂಜೂರು ಮಾಡಲಾಗಿದೆ - ಆರ್ ಅಶೋಕ ಆರೋಪ, ಪ್ರತಿಭಟನೆಗಳ ಎಚ್ಚರಿಕೆ
ಕೋಗಿಲುವಿನಲ್ಲಿ ಬಾಂಗ್ಲಾದೇಶಿಗಳಿಗೆ ಭೂಮಿ ಮಂಜೂರು ಮಾಡಲಾಗಿದೆ - ಆರ್ ಅಶೋಕ ಆರೋಪ, ಪ್ರತಿಭಟನೆಗಳ ಎಚ್ಚರಿಕೆ
ಕಾಬೂಲ್ ಆಸ್ಪತ್ರೆಯ ಮೇಲಿನ ಪಾಕಿಸ್ತಾನದ ದಾಳಿಯನ್ನು ಖಂಡಿಸಿದ ಭಾರತ
ಕಾಬೂಲ್ ಆಸ್ಪತ್ರೆಯ ಮೇಲಿನ ಪಾಕಿಸ್ತಾನದ ದಾಳಿಯನ್ನು ಖಂಡಿಸಿದ ಭಾರತ
ಸಚಿವರ ಗೈರು, ನಿರಂತರ ನಿರ್ಲಕ್ಷ್ಯದಿಂದ ಬೇಸತ್ತು ಸಭಾತ್ಯಾಗ ಮಾಡಿ ಸದನವನ್ನು ಮುಂದೂಡಿದ ಸ್ಪೀಕರ್ ಖಾದರ್
ಸಚಿವರ ಗೈರು, ನಿರಂತರ ನಿರ್ಲಕ್ಷ್ಯದಿಂದ ಬೇಸತ್ತು ಸಭಾತ್ಯಾಗ ಮಾಡಿ ಸದನವನ್ನು ಮುಂದೂಡಿದ ಸ್ಪೀಕರ್ ಖಾದರ್
ಶಿವಾಲಿಕ್ ಎಲ್‌ಪಿಜಿ ವಾಹಕ ಹಡಗು ಇರಾನ್ ದಾಟಿದ್ದು ಇಂದು ಮುಂಬೈ ತಲುಪಲಿದೆ - ಶಿಪ್ಪಿಂಗ್ ಸಚಿವಾಲಯ, ಭಾರತ ಸರ್ಕಾರ
ಶಿವಾಲಿಕ್ ಎಲ್‌ಪಿಜಿ ವಾಹಕ ಹಡಗು ಇರಾನ್ ದಾಟಿದ್ದು ಇಂದು ಮುಂಬೈ ತಲುಪಲಿದೆ - ಶಿಪ್ಪಿಂಗ್ ಸಚಿವಾಲಯ, ಭಾರತ ಸರ್ಕಾರ
ಕಾಂಗ್ರೆಸ್ ಶಾಸಕರ ಖರೀದಿ... ಖಾಲಿ ಚೆಕ್‌ಗಳೊಂದಿಗೆ ಸಿಕ್ಕಿಬಿದ್ದಿ ಇಬ್ಬರು ; ಪ್ರತಿ ಶಾಸಕರಿಗೆ 5 ಕೋಟಿ - ಡಿಕೆಶಿ
ಕಾಂಗ್ರೆಸ್ ಶಾಸಕರ ಖರೀದಿ... ಖಾಲಿ ಚೆಕ್‌ಗಳೊಂದಿಗೆ ಸಿಕ್ಕಿಬಿದ್ದಿ ಇಬ್ಬರು ; ಪ್ರತಿ ಶಾಸಕರಿಗೆ 5 ಕೋಟಿ - ಡಿಕೆಶಿ
 ಅಫ್ಘಾನಿಸ್ತಾನದ ಭೂಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಖಂಡಿಸಿದ ಭಾರತ
ಅಫ್ಘಾನಿಸ್ತಾನದ ಭೂಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ವಾಯುದಾಳಿಯನ್ನು ಖಂಡಿಸಿದ ಭಾರತ
ಆತಂಕದ ಇಂಧನ ಸಂಗ್ರಹಣೆಯ ವಿರುದ್ಧ ಸೂಚನೆ ನೀಡಿದ ಕೇಂದ್ರ ಸರ್ಕಾರ
ಆತಂಕದ ಇಂಧನ ಸಂಗ್ರಹಣೆಯ ವಿರುದ್ಧ ಸೂಚನೆ ನೀಡಿದ ಕೇಂದ್ರ ಸರ್ಕಾರ
ಉದ್ವಿಗ್ನತೆಯ ನಡುವೆಯೂ ಹಾರ್ಮುಜ್ ಜಲಸಂಧಿಯ ಮೂಲಕ ಭಾರತ-ಬಂಧಿತ ಎರಡು ಎಲ್‌ಪಿಜಿ ಟ್ಯಾಂಕರ್‌ಗಳಿಗೆ ಅನುಮತಿ ನೀಡಿದ  ಇರಾನ್
ಉದ್ವಿಗ್ನತೆಯ ನಡುವೆಯೂ ಹಾರ್ಮುಜ್ ಜಲಸಂಧಿಯ ಮೂಲಕ ಭಾರತ-ಬಂಧಿತ ಎರಡು ಎಲ್‌ಪಿಜಿ ಟ್ಯಾಂಕರ್‌ಗಳಿಗೆ ಅನುಮತಿ ನೀಡಿದ ಇರಾನ್
ನನ್ನ ಕೊನೆಯ ಉಸಿರಿನವರೆಗೂ ನಾನು ರಾಜಕೀಯದಲ್ಲಿಯೇ ಇರುತ್ತೇನೆ - ಸಿಎಂ ಸಿದ್ದರಾಮಯ್ಯ
ನನ್ನ ಕೊನೆಯ ಉಸಿರಿನವರೆಗೂ ನಾನು ರಾಜಕೀಯದಲ್ಲಿಯೇ ಇರುತ್ತೇನೆ - ಸಿಎಂ ಸಿದ್ದರಾಮಯ್ಯ
ಹಾರ್ಮುಜ್ ಜಲಸಂಧಿಯಿಂದ ಮುಂಬೈ ತಲುಪಿದ ಭಾರತದ ಮೊದಲ ಟ್ಯಾಂಕರ್‌
ಹಾರ್ಮುಜ್ ಜಲಸಂಧಿಯಿಂದ ಮುಂಬೈ ತಲುಪಿದ ಭಾರತದ ಮೊದಲ ಟ್ಯಾಂಕರ್‌
48,000 ಮೆಟ್ರಿಕ್ ಟನ್ ನಾಫ್ತಾವನ್ನು ಸಾಗಿಸುತ್ತಿದ್ದ ತೈಲ ಟ್ಯಾಂಕರ್ ಎಂಟಿ ಸೇಫ್ಸೀ ವಿಷ್ಣು ಮೇಲೆ ದಾಳಿ
48,000 ಮೆಟ್ರಿಕ್ ಟನ್ ನಾಫ್ತಾವನ್ನು ಸಾಗಿಸುತ್ತಿದ್ದ ತೈಲ ಟ್ಯಾಂಕರ್ ಎಂಟಿ ಸೇಫ್ಸೀ ವಿಷ್ಣು ಮೇಲೆ ದಾಳಿ

ನ್ಯೂಸ್ MORE NEWS...