ಮಗನ ಮೇಲೆ ಗುಂಡು ಹಾರಿಸಿದ ತಂದೆ! | ಜನತಾ ನ್ಯೂಸ್
ಮಂಗಳೂರು : ಉದ್ಯಮಿಯೊಬ್ಬ ತನ್ನ ಮಗನ ಮೇಲೆಯೇ ಗುಂಡುಹಾರಿಸಿದ ಘಟನೆ ಮಂಗಳೂರಿನ ಜೆಪ್ಪು ಮೋರ್ಗನ್ ಗೇಟ್ ಬಳಿ ನಡೆದಿದೆ.
ಮೋರ್ಗನ್ಸ್ ಗೇಟ್ ಬಳಿ ಅಪ್ಪನಿಂದಲೇ ಮಗನ ಮೇಲೆ ಶೂಟೌಟ್ ನಡೆದಿದೆ. ಬಾಲಕ ಸುಧೀಂದ್ರ (14) ತಲೆಗೆ ಗುಂಡು ತಗುಲಿದೆ ಎನ್ನಲಾಗಿದ್ದು, ಗಂಭೀರ ಗಾಯಗೊಂಡಿದ್ದಾನೆ
ನಗರದ ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ. ಕಚೇರಿಯಲ್ಲಿ ಕೇಲಸ ಮಾಡುತ್ತಿದ್ದ ನೌಕರರೊಬ್ಬರು ವೇತನ ಕೇಳಿ ಮಾಲೀಕ ರಾಜೇಶ್ ಪ್ರಭು ಹತ್ತಿರಕ್ಕೆ ಬಂದಿದ್ದರು. ವೇತನ ಕೇಳಿದ ವಿಚಾರದಲ್ಲಿ ನೌಕರರ ಜತೆ ವಾಗ್ವಾದ ನಡೆದಿತ್ತು. ಆಗ ನೌಕರರ ರಾಜೇಶ್ ನೌಕರರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.. ಆದರೆ ಅದು ಮಿಸ್ ಪೈರ್ ಆಗಿ ಅವರ ಪುತ್ರ ಸುಧೀಂದ್ರನ ತಲೆಯ ಭಾಗಕ್ಕೆ ತಗುಲಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಕಮಿಷನರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.