ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯೋರು, ಚಪ್ಪಲಿ ಎಸೆಯೋರೂ ಇರ್ತಾರೆ: ಸಲೀಂ-ಉಗ್ರಪ್ಪ ವಿರುದ್ಧ ಡಿಕೆಶಿ ಗರಂ | ಜನತಾ ನ್ಯೂಸ್
ಬೆಂಗಳೂರು : ಡಿಕೆಎಸ್ ಕಮಿಷನ್ ಗಿರಾಕಿ ಅನ್ನೋ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ಸಲೀಂ-ಉಗ್ರಪ್ಪ ನಡುವಿನ ಸಂಭಾಷಣೆಯಿಂದ ಖಂಡಿತ ಮುಜಗರ ಆಗಿದೆ. ನನಗೂ ಕಾಂಗ್ರೆಸ್ಗೂ ಸಂಬಂಧ ಇಲ್ಲದ ವಿಚಾರ ಅವು. ಆಂತರಿಕ ಮಾತುಗಳು. ಅದನ್ನು ನಾನು ಅಲ್ಲಗೆಳೆಯಲ್ಲ. ಮುಲಾಜಿಲ್ಲದೆ ರೆಹಮಾನ್ ಖಾನ್ ಸಮಿತಿ ಕ್ರಮಕೈಗೊಳ್ಳುತ್ತದೆ.
ನಾನ್ಯಾಕೆ ಮೀಡಿಯಾವನ್ನು ತಪ್ಪು ಅನ್ನಲಿ? ನಾವು ಮಾತಾಡುವುದನ್ನು ತೋರಿಸುತ್ತೀರಿ. ಬಿಎಸ್ವೈ- ಅನಂತ್ ಕುಮಾರ್ ಮಾತನಾಡಿದ್ದನ್ನು ತೋರಿಸಿದ್ದೀರಿ. ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವವರು ಇರುತ್ತಾರೆ. ಕಲ್ಲು, ಮೊಟ್ಟೆ, ಚಪ್ಪಲಿ ಎಸೆಯುವವರು ಇರುತ್ತಾರೆ. ಮತದಾರರೇ ನನ್ನ ತಕ್ಕಡಿ. ತಕ್ಕಡಿ ಏರಿಸುವವರು ಜನ. ಅವರು- ಇವರು ಮಾತನಾಡಿದರೆ ಏನೂ ಆಗಲ್ಲ ಎಂದು ಖಾರವಾಗಿಯೇ ಡಿಕೆಶಿ ಪ್ರತಿಕ್ರಿಯಿಸಿದರು.
ಆದರೆ ನನಗೂ ಇದಕ್ಕೂ ಸಂಬಂಧ ಇಲ್ಲ. ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯೋರು, ಕಲ್ಲು ಎಸೆಯೋರು, ಚಪ್ಪಲಿ ಎಸೆಯೋರು ಎಲ್ಲರೂ ಇರ್ತಾರೆ. ಇದೆಲ್ಲ ಪಾರ್ಟ್ ಆಫ್ ಪಾಲಿಟಿಕ್ಸ್. ಸಲೀಂ ಬಹಿರಂಗ ಹೇಳಿಕೆ ಕೊಟ್ಟಿಲ್ಲ. ಅದು ಅವರ ಬಹಿರಂಗ ಹೇಳಿಕೆ ಅಲ್ಲ. ಯಾವುದೇ ಮಾಧ್ಯಮಕ್ಕೆ ಹೇಳಿಕೆಯನ್ನು ಅವರು ಕೊಟ್ಟಿಲ್ಲ ಎಂದರು. ಅದಕ್ಕೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ. ನಾನು ಹಳ್ಳಿಯಿಂದ ಬಂದವನು. ನನ್ನದೇ ಆದ ಬಾಡಿ ಲಾಂಗ್ವೇಜ್ ಇದೆ ಎಂದರು.