ಐಪಿಎಲ್ ಬೆಟ್ಟಿಂಗ್ಗೆ ಸಾಲ: ನದಿಗೆ ಹಾರಿ ಆತ್ಮಹತ್ಯೆ ಶಂಕೆ | ಜನತಾ ನ್ಯೂಸ್
ಬಾಗಲಕೋಟೆ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ಗಾಗಿ ಸಾಲ ಮಾಡಿದ್ದ ಹಣ್ಣಿನ ವ್ಯಾಪಾರಿಯೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀಳಗಿ ತಾಲೂಕಿನ ಕಾತರಕಿ ಸೇತುವೆ ಬಳಿಯ ಘಟಪ್ರಭಾ ನದಿಯಲ್ಲಿ ಸಂಭವಿಸಿದೆ.
ಬಾಗಲಕೋಟೆ ತಾಲ್ಲೂಕಿನ ಕಲಾದಗಿ ಗ್ರಾಮದ ನಿವಾಸಿ ಹಣ್ಣಿನ ವ್ಯಾಪರಿ ಸೈಯ್ಯದ್ ವಾಳದ (38) ಎಂಬಾತ ಮೃತ ವ್ಯಕ್ತಿ.
ಸೈಯ್ಯದ್ ವಾಳದ ಐಪಿಎಲ್ ಬೆಟ್ಟಿಂಗ್ನಿಂದ ಲಕ್ಷಗಟ್ಟಲೇ ಸಾಲು ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದ. ಈಗ ಐಪಿಎಲ್ ಬೆಟ್ಟಿಂಗ್ನಿಂದ ಮಾಡಿಕೊಂಡ ಲಕ್ಷಗಟ್ಟಲೇ ಸಾಲ ತೀರಿಸಲಾಗದೆ ವ್ಯಾಪರಿ ಘಟಪ್ರಭಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.
RELATED TOPICS:
English summary :Bagalkote