ಪುನೀತ್ ಅಗಲಿಕೆ ನೋವು ತಾಳಲಾರದೆ ನೇಣಿಗೆ ಕೊರಳೊಡ್ಡಿದ ಮತ್ತೊಬ್ಬ ಅಭಿಮಾನಿ | ಜನತಾ ನ್ಯೂಸ್
ರಾಮನಗರ : ಪುನೀತ್ ಅಗಲಿಕೆ ನೋವು ತಾಳಲಾರದೆ ಮತ್ತೊಬ್ಬ ಅಭಿಮಾನಿ ನೇಣಿಗೆ ಶರಣಾಗಿದ್ದಾನೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ನಗರದ ಎಲೆಕೇರಿ ನಿವಾಸಿ ವೆಂಕಟೇಶ್(25) ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪುನೀತ್ ಅಪ್ಪಟ ಅಭಿಮಾನಿಯಾಗಿದ್ದ ಈತ, ತನ್ನ ಮೈ ಮೇಲೆ ಪುನೀತ್ ಬಗ್ಗೆ ಟ್ಯಾಟೂ ಹಾಕಿಸಿಕೊಂಡಿದ್ದ. ಕ್ಷೌರಿಕ ವೃತ್ತಿ ಮಾಡ್ತಿದ್ದ ವೆಂಕಟೇಶ್, ಪುನೀತ್ ಅವರನ್ನ ಭೇಟಿ ಮಾಡಿ ಫೋಟೋವನ್ನೂ ತೆಗೆಸಿಕೊಂಡು ಸಂಭ್ರಮಿಸಿದ್ದ.
ಪುನೀತ್ ಅಕಾಲಿಕ ನಿಧನದಿಂದ ನೊಂದಿದ್ದು ಕಳೆದ ಮೂರು ದಿನಗಳಿಂದ ಊಟ ಬಿಟ್ಟಿದ್ದನಂತೆ. ಅಪ್ಪು ಸಮಾಧಿ ನೋಡಲೇಬೇಕೆಂಬ ಆಶಯ ಹೊಂದಿದ್ದನಂತೆ.
ಗುರುವಾರ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
RELATED TOPICS:
English summary :Puneeth Rajkumar