ತಂಗಿ ಗಂಡನೊಂದಿಗೆ ಅಕ್ರಮ ಸಂಬಂಧ: ದೇವರ ಪ್ರಸಾದವೆಂದು ನಿದ್ದೆ ಮಾತ್ರೆ ಕೊಟ್ಟು ಕೊಲೆಗೆ ಯತ್ನ | ಜನತಾ ನ್ಯೂಸ್
ಯಾದಗಿರಿ : ತಂಗಿಯ ಗಂಡನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಅಕ್ಕ ತನ್ನ ಗಂಡನಿಗೆ ದೇವರ ಪ್ರಸಾದವೆಂದು ನಂಬಿಸಿ ನಿದ್ದೆ ಮಾತ್ರೆ ಕೊಟ್ಟು ಕೊಲೆಗೆ ಯತ್ನಿಸಿದ ಅಮಾನವೀಯ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿ ಹೂವಿನಹಾಳ ಗ್ರಾಮದ ಚಂದ್ರಕಲಾ ಹಾಗೂ ಆಕೆಯ ಸ್ವಂತ ತಂಗಿಯ ಗಂಡ ಬಸನಗೌಡ ಸೆರಿಕೊಂಡು ಗಂಡ ವಿಶ್ವನಾಥ ರೆಡ್ಡಿಗೆ ದೇವರ ಪ್ರಸಾದದಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಟ್ಟಿದ್ದರು.
ಚಂದ್ರಕಲಾ ಮತ್ತು ಬಸನಗೌಡ ಹಲವಾರು ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಷಯ ಗಂಡನಿಗೆ ಗೊತ್ತಾಗುತ್ತೆಂಬ ಭಯದಿಂದ ಮಧ್ಯ ರಾತ್ರಿ ನಿದ್ದೆ ಮಾತ್ರೆ ಕೊಟ್ಟು ತನ್ನ ಗಂಡನ ಕೊಲೆಗೆ ಚಂದ್ರಕಲಾ ಸ್ಕೆಚ್ ಹಾಕಿದ್ದಾಳೆ.
ನಿದ್ದೆ ಮಾತ್ರೆ ಕೊಟ್ಟು ನಂತರ ಕತ್ತು ಹಿಸುಕಿ ಕೊಲೆ ಮಾಡುವ ಪ್ಲಾನ್ ಮಾಡಿದ್ದರು. ಆದರೆ ಕತ್ತು ಹಿಸುಕಿ ಕೊಲೆ ಮಾಡುವ ವೇಳೆ ಚಂದ್ರಕಲಾಳ ಗಂಡ ವಿಶ್ವನಾಥ ರೆಡ್ಡಿ ಎಚ್ಚರವಾಗಿ ಅವರಿಂದ ತಪ್ಪಿಸಿಕೊಂಡು ಬಂದಿದ್ದಾನೆ. ನಂತರ ಕೊಲೆ ಮಾಡಲು ಬಂದ ಆರೋಪಿ ಬಸನಗೌಡನ ಪೋನ್ ಕಾಲ್ ಚೆಕ್ ಮಾಡಿದಾಗ ಇಬ್ಬರು ಸೇರಿ ಕೊಲೆಗೆ ಮಾಡಿದ ಪ್ಲಾನ್ ಬಯಲಾಗಿದೆ.
ಸದ್ಯ ಚಂದ್ರಕಲಾ ಹಾಗೂ ಬಸನಗೌಡ ಇಬ್ಬರನ್ನು ಸಹ ಪೊಲೀಸರು ಬಂಧಿಸಿದ್ದು, ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ