ಪ್ರಿಯಕರನ ಸಾವಿಗೆ ಮನನೊಂದು ಸಾವಿಗೆ ಶರಣಾದ ಯುವತಿ | ಜನತಾ ನ್ಯೂಸ್
ಕಲಬುರಗಿ : ಕಲಬುರಗಿ ನಗರದ ಯುವತಿ ಶ್ರುತಿ ಮತ್ತು ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಮೂಲದ ಹನುಮಂತ ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮನೆಯವರಿಂದಲೂ ಮದುವೆಗೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು.
ಶೃತಿ(18) ಆತ್ಮಹತ್ಯೆಗೆ ಶರಣಾದ ಯುವತಿ... ಕಳೆದ ಒಂದು ತಿಂಗಳ ಹಿಂದೆ ಬಸವನ ಬಾಗೇವಾಡಿಯಲ್ಲಿ ಅದೇ ಯುವಕ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದ. ಯುವಕನ ಸಾವಿನಿಂದ ಮನನೊಂದ ಯುವತಿ ಆಹಾರ ತ್ಯಜಿಸಿದ್ದರು.
ತಿಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಯುವತಿ ನಗರದ ಪಿಡ್ಲ್ಯೂಡಿ ಕ್ವಾಟ್ರಸ್ನಲ್ಲಿ ನಿನ್ನೆ ಸಂಜೆ ಮನೆಯ ಬಾಗಿಲಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಮಕ್ಕಳನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪಕರಣ ದಾಖಲಾಗಿದೆ.