ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ: ಓರ್ವ ಸಾವು | ಜನತಾ ನ್ಯೂಸ್
ಚಿಕ್ಕಬಳಾಪುರ : ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಂತಾಮಣಿ ತಾಲೂಕಿನ ನಾರಾಯಣಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಾರಾಯಣಪಲ್ಲಿ ಗ್ರಾಮದ ಮಂಜುನಾಥ್(45), ಪತ್ನಿ ಹನುಮಕ್ಕ(36) ಹಾಗೂ ಮಕ್ಕಳಾದ ಮುನಿರಾಜು(18) ಹಾಗೂ ಮುರುಳಿ(15) ಆತ್ಮಹತ್ಯೆಗೆ ಯತ್ನಿಸಿದ ಕುಟುಂಬ, ಈ ನಾಲ್ವರಲ್ಲಿ ಮುರುಳಿ ಸಾವನ್ನಪ್ಪಿದ್ದಾನೆ.
ದಂಪತಿ ಮಕ್ಕಳೊಡನೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮುರಳಿ(14) ಸಾವನ್ನಪ್ಪಿದ್ದು ಮೂವರು ಅದೃಷ್ಟವಶಾತ್ ಬದುಕುಳಿದಿದ್ದಾರೆ.
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇನ್ನುಳಿದ ಮೂವರ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
RELATED TOPICS:
English summary :Chikkaballapura