ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದ ಬೆಸ್ಕಾಂ ಲೈನ್ ಮ್ಯಾನ್ | ಜನತಾ ನ್ಯೂಸ್
ದಾವಣಗೆರೆ : ದಾವಣಗೆರೆಯ ಬೆಸ್ಕಾಂ ಸಹಾಯ ಕಾರ್ಯ ನಿರ್ವಾಹಕ ಕಚೇರಿಯ ಎಂಟಿ ಉಪ ವಿಭಾಗದಲ್ಲಿ ಲೈನ್ಮ್ಯಾನ್ ಆಗಿದ್ದ ರವಿಕುಮಾರ್ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ.
ದಾವಣಗೆರೆಯ ಶ್ರಿರಾಮ್ ಎಂಬುವರು ಹಿಟ್ಟಿನ ಗಿರಣಿಯ ಹಿಂಬಾಕಿ ಬಿಲ್ ಗೆ 15 ಸಾವಿರ ದಂಡ ಪಾವತಿಸಬೇಕಿತ್ತು. ಶ್ರೀರಾಮ್ ಎನ್ನುವರಿಗೆ ದಂಡವನ್ನು ಸರಿಪಡಿಸಲು ರವಿಕುಮಾರ್ ಐದು ಸಾವಿರ ಬೇಡಿಕೆ ಇಟ್ಟಿದ್ದರು.
ಈ ಕುರಿತು ಹಿಟ್ಟಿನ ಗಿರಣಿ ಮಾಲೀಕ ಶ್ರೀರಾಮ್ ಎಸಿಬಿ ಗೆ ದೂರು ಸಲ್ಲಿಸಿದ್ದರು. ಇಂದು ಕಚೇರಿ ಆವರಣದಲ್ಲಿರುವ ಗಣೇಶ ದೇವಸ್ಥಾನದ ಬಳಿ ಶ್ರೀರಾಮ್ ಅವರಿಂದ ಲೈನ್ಮ್ಯಾನ್ ರವಿಕುಮಾರ್ 5 ಸಾವಿರ ರೂ. ಲಂಚ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ, ರವಿಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ.
RELATED TOPICS:
English summary :Davanagere