ಕುಡಿದ ಮತ್ತಿನಲ್ಲಿ ಕೊಡಲಿಯಿಂದ ಮನಬಂದಂತೆ ಹಲ್ಲೆ, ಕೊಲೆ! | ಜನತಾ ನ್ಯೂಸ್
ಹಾಸನ : ಕುಡಿದ ಮತ್ತಿನಲ್ಲಿ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೇಲೂರು ತಾಲೂಕಿನ ಹಳೇಬೀಡು ವ್ಯಾಪ್ತಿಯ ವಡ್ಡರಹಳ್ಳಿಯಲ್ಲಿ ನಡೆದಿದೆ.
50 ವರ್ಷದ ಸೋಮಣ್ಣ ಎಂಬ ವ್ಯಕ್ತಿಯನ್ನು 27 ವರ್ಷದ ಯಶ್ವಂತ್ ಕೊಲೆ ಮಾಡಿದ್ದಾನೆ. ಆರೋಪಿ ಯಶ್ವಂತ್ ತನ್ನ ಗ್ರಾಮದಲ್ಲಿ ಗಲಾಟೆ ಮಾಡುವ ಜತೆಗೆ ಅಕ್ರಮವಾಗಿ ಮದ್ಯ ಮಾರಾಟವನ್ನೂ ಮಾಡುತ್ತಿದ್ದ, ಸೋಮಣ್ಣ ಆಗಾಗ ಯಶ್ವಂತ್ಗೆ ಬುದ್ಧಿಮಾತು ಹೇಳುತ್ತಿದ್ದ ಎನ್ನಲಾಗಿದೆ.
ಕುಡಿದ ಮತ್ತಿನಲ್ಲಿ ಯಶವಂತ್ ಹಾಗೂ ಸೋಮಣ್ಣ ನಡುವೆ ಜಗಳ ಶುರುವಾಗಿದ್ದು, ಬಳಿಕ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಯಶವಂತ್, ಕೊಡಲಿಯಿಂದ ಸೋಮಣ್ಣನ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವವಾಗಿ ಸೋಮಣ್ಣ ಸಾವನ್ನಪ್ಪಿದ್ದಾನೆ.
ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
English summary :Hasan: Drunk and murder!