ನನ್ಗೆ ಗೃಹ ಖಾತೆ ಕೊಡಿ ಹಿಜಾಬ್, ಕೇಸರಿ ಶಾಲು ವಿವಾದ ಬಗೆಹರಿಸ್ತೇನೆ: ಯತ್ನಾಳ್ | ಜನತಾ ನ್ಯೂಸ್
ವಿಜಯಪುರ : ಗೃಹ ಖಾತೆ ನೀಡಿದರೆ ಹಿಜಾಬ್ ಮತ್ತು ಕೇಸರಿ ಶಾಲು ಸಮಸ್ಯೆ ಬಗೆಹರಿಸುತ್ತೇನೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ಕ್ರಿಯೆಗೆ ಪ್ರತಿಕ್ರಿಯೆ ಇರುತ್ತದೆ. ವಿದ್ಯಾರ್ಥಿಗಳು ಕೇಸರಿ ಶಾಲು ಹಾಕಿಕೊಂಡು ಬರುತ್ತಿರುವುದು ನಿಜ. ಇದು ಕ್ರಿಯೆಗೆ ಪ್ರತಿಕ್ರಿಯೆಯಾಗಿದೆ. ಇದು ಶಾಲೆಗಳ ಸಮವಸ್ತ್ರದ ವಿಚಾರ. ನಿಯಮ ಉಲ್ಲಂಘಿಸಿ ನಮ್ಮ ಧರ್ಮ ಹೀಗೆ ಹೇಳುತ್ತದೆ ಎಂದು ಹೇಳಬಾರದು.
ನಾನು ಯಾವುದೇ ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಬಳಿ ಏಕಾಂಕಿಯಾಗೇ ಅರ್ಧ ಗಂಟೆ ಚರ್ಚಿಸಿದ್ದೇನೆ. ನಗರಾಭಿವೃದ್ಧಿ ಖಾತೆ ಅಥವಾ ಯಾವುದೇ ಖಾತೆ ಕೊಟ್ಟರು ಸರಿಯೇ, ಗೃಹ ಸಚಿವರ ಖಾತೆಯನ್ನು ಕೊಟ್ರೇ.. ಹಿಜಾಬ್, ಕೇಸರಿ ಶಾಲು ವಿವಾದಕ್ಕೆ ಅಂತ್ಯ ಹಾಡೋದಾಗಿ ತಿಳಿಸಿದರು.
ಈ ದೇಶ ತಮಗೆ ವಾಸಿಸಲು ಯೋಗ್ಯ ಅಲ್ಲ ಎನ್ನುವವರು ಜನ್ನತ್ಗಾದರೂ ಹೋಗಲಿ, ಪಾಕಿಸ್ತಾನಕ್ಕಾದರೂ ಹೋಗಲಿ ಎಂದು ವಾಗ್ದಾಳಿ ನಡೆಸಿದರು.
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವಿದೆ. ಇಲ್ಲಿ ದೇಶಭಕ್ತಿಗೆ ಮಾತ್ರವೇ ಅವಕಾಶ. ಶಾಲಾ-ಕಾಲೇಜುಗಳಲ್ಲಿ ಧಾರ್ಮಿಕ ಸಂಪ್ರದಾಯಕ್ಕೆ ಅವಕಾಶವಿಲ್ಲ. ಯುವ ಜನರು ಜಾಗೃತರಾಗಬೇಕು. ದೇಶಭಕ್ರರಾಗಬೇಕು. ಎಲ್ಲಾ ಕಾಲೇಜಿನಲ್ಲಿ ವಸ್ತ್ರ ಸಂಹಿತೆ ಪಾಲಿಸಬೇಕು ಎಂದು ಹೇಳಿದರು.