ಕಲ್ಲಿನಿಂದ ಚಚ್ಚಿ ಚಿಂದಿ ಹಾಗೂ ಭಿಕ್ಷಾಟನೆ ಮಾಡುತ್ತಾ ಬದುಕಿತ್ತಿದ್ದ ಮಹಿಳೆಯ ಭೀಕರ ಕೊಲೆ | ಜನತಾ ನ್ಯೂಸ್
ಹುಬ್ಬಳ್ಳಿ : ಕಲ್ಲಿನಿಂದ ಚಚ್ಚಿ ಚಿಂದಿ ಹಾಗೂ ಭಿಕ್ಷಾಟನೆ ಮಾಡುತ್ತಾ ಬದುಕಿತ್ತಿದ್ದ ಮಹಿಳೆಯ ಭೀಕರ ಕೊಲೆಗೈದ ಘಟನೆ ನೆಹರೂ ಮೈದಾನ ಬಳಿಯ ಕೃಷ್ಣ ಭವನ ಎದುರು ಶನಿವಾರ ಬೆಳಗಿನ ಜಾವ ನಡೆದಿದೆ.
ಮೃತ ಮಹಿಳೆ ದಾವಣಗೆರೆ ಮೂಲದ ಸುಮಾ (28) ಎಂದು ಗುರುತಿಸಲಾಗಿದೆ. ಬಳ್ಳಾರಿ ಮೂಲದ ವ್ಯಕ್ತಿಯನ್ನು ಮದುವೆ ಮಾಡಿಕೊಂಡು ಕಳೆದ ಒಂದು ವರ್ಷದ ಹಿಂದೆ ನಗರದಲ್ಲಿ ಚಿಂದಿ ಹಾಗೂ ಭಿಕ್ಷಾಟನೆ ಮಾಡುತ್ತಾ ಬದುಕು ನಡೆಸುತ್ತಿದ್ದರೆಂದು ತಿಳಿದು ಬಂದಿದೆ.
ಮಾ.11ರಂದು ಗಂಡ ಹೆಂಡತಿ ಮದ್ಯೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು, ಕುಡಿದಿದ್ದ ಗಂಡ ಸುಮಾಳ ತಲೆಗೆ ಅಲ್ಲಿಯೇ ಬಿದ್ದಿರುವ ಕಲ್ಲಿನಿಂದ ಹೊಡೆದಿದ್ದು, ಪರಿಣಾಮ ತೀವ್ರರಕ್ತಸ್ರಾವದಿಂದ ಒದ್ದಾಡುತ್ತಿದ್ದಳು. ಆಗ ಅಲ್ಲಿಯೇ ಇದ್ದ ಸ್ಥಳೀಯರು ಗಂಭೀರವಾಗಿ ಗಾಯಗೊಂಡಿದ್ದ ಸುಮಾಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಡಿಸಿಪಿ, ಎಸಿಪಿ ಹಾಗೂ ಶಹರ ಠಾಣೆ ಇನ್ಸಪೆಕ್ಟರ್ ಭೇಟಿ ಕೊಟ್ಟು ಪರಿಶೀಲಿಸಿದ್ದಾರೆ.