ಕುರಿ ಕದಿಯಲು ಬಂದು ಕುರಿಗಾಯಿಯನ್ನು ಕೊಂದು ಕುರಿಗಳನ್ನು ಕದ್ದ ಕಳ್ಳರು! | JANATA NEWS
ಹಾವೇರಿ : ಕುರಿ ಕಳ್ಳತನಕ್ಕೆ ಬಂದ ಕಳ್ಳರು ಕುರಿ ಮಾಲೀಕನನ್ನೇ ಕೊಂದಿರುವ ಭಯಾನಕ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗಂಗಾಪುರ ಗ್ರಾಮದಲ್ಲಿ ನಡೆದಿದೆ.
ಕೊಲೆಯಾದ ಕುರಿಗಾಹಿಯನ್ನು ವೆಂಕಟೇಶ ಮತ್ತೂರು (50) ಎಂದು ಗುರುತಿಸಲಾಗಿದೆ. ಕುರಿ ಕಳ್ಳತನಕ್ಕೆ ಬಂದ ಕಳ್ಳರು ಕುರಿಗಾಹಿಯನ್ನು ಹೊಡೆದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ನಿನ್ನೆ ಸಂಜೆ ಹಾವೇರಿಯಲ್ಲಿ ಮಳೆ ಸುರಿದಿತ್ತು. ಮಳೆ ಹಿನ್ನೆಲೆಯಲ್ಲಿ ಕುರಿಯನ್ನ ನೋಡಿಕೊಳ್ಳಲು ಯಾರೂ ಇರುವುದಿಲ್ಲ ಎಂದು ತಿಳಿದು ಕಳ್ಳರು, ಪಾರಂಗೆ ನುಗ್ಗಿದ್ದಾರೆ. ಈ ವೇಳೆ ಮಾಲೀಕ ವೆಂಕಟೇಶ್ ಕಳ್ಳರನ್ನ ತಡೆಯಲು ಬಂದಿದ್ದಾರೆ. ಆಗ ವೆಂಕಟೇಶ್ ಮೇಲೆ ರಾಡ್ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ.
40 ಕುರಿಗಳನ್ನು ಕಳ್ಳರು ಕದ್ದೊಯ್ದಿರುವುದಾಗಿ ಹೇಳಲಾಗಿದೆ. ರಾಣೆಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.