ಮದ್ಯ ಸೇವನೆಗೆ ಹಣಕೊಡಲಿಲ್ಲವೆಂದು ತಂದೆಯನ್ನೇ ಕೊಲೆ ಮಾಡಿದ ಮಗ! ಆರೋಪಿ ಅರೆಸ್ಟ್ | JANATA NEWS
ದಾವಣಗೆರೆ : ಮದ್ಯ ಸೇವೆನೆ ಮಾಡಲು ಹಣವನ್ನು ಕೊಡದಿದ್ದಕ್ಕೆ ತಂದೆಯನ್ನೇ ಪಾಪಿ ಮಗ ಕೊಲೆ ಮಾಡಿರುವ ಘಟನೆ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ನಡೆದಿದೆ.
ಈ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ತಲೆ ಮೇಲೆ ಕಲ್ಲು ಎತ್ತಿಹಾಕಿ ಪುತ್ರ ನರಸಿಂಹಪ್ಪ(46) ತಂದೆ ಮಂಜಪ್ಪ(65) ಎಂಬುವವರನ್ನು ಬರ್ಬರವಾಗಿ ಮಾಡಿದ್ದಾನೆ.
ಮಗ ನರಸಿಂಹಪ್ಪ ಕಳೆದ ರಾತ್ರಿ ಕುಡಿಯಲು ಹಣಬೇಕು ಎಂದು ಮಂಜಪ್ಪನನ್ನು ಪೀಡಿಸಿದ್ದಾನೆ. ಇದಕ್ಕೆ ಮಂಜಪ್ಪ, ನನ್ನ ಬಳಿ ಹಣವಿಲ್ಲ. ಸುಮ್ಮನ್ನೆ ಊಟ ಮಾಡಿ ಮಲಗು ಎಂದು ಗದರಿದ್ದಾರೆ. ಎದೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಮಂಜಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿದ ಹೊನ್ನಾಳಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.