ರಾಜೀನಾಮೆ ನೀಡದಂತೆ ಈಶ್ವರಪ್ಪ ಎದುರು ಕಣ್ಣೀರಿಟ್ಟ ಮಹಿಳಾ ಕಾರ್ಯಕರ್ತರು! | JANATA NEWS
ಶಿವಮೊಗ್ಗ : ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಆರೋಪ ಎದುರಿಸುತ್ತಿರುವ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ, ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲು ಶುಕ್ರವಾರ ಬೆಂಗಳೂರಿಗೆ ತೆರಳುವ ಮುನ್ನ ಬಿಜೆಪಿ ಕಾರ್ಯಾಲಯಕ್ಕೆ ಬಂದಾಗ ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡದಂತೆ ಈಶ್ವರಪ್ಪ ಎದುರು ಕಣ್ಣೀರು ಹಾಕಿದರು.
ಈಶ್ವರಪ್ಪರ ಭಾವಚಿತ್ರ ಹಿಡಿದು ಕಣ್ಣೀರು ಹಾಕಿದ ಮಹಿಳಾ ಮೋರ್ಚಾ ಮಹಿಳೆಯರು ಅಳುತ್ತಾ ಈಶ್ವರಪ್ಪರನ್ನು ಬಿಳ್ಕೊಟ್ಟಿದ್ದಾರೆ. ಈಶ್ವರಪ್ಪ ನಿಮ್ಮ ಜೊತೆ ನಾವಿದ್ದೇವೆ ಎಂದು ಘೋಷಣೆ ಕೂಗಿರುವ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ನಾಯಕರಿಗೆ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಈಶ್ವರಪ್ಪ ಮಾತನಾಡಿ ನನ್ನ ಮೇಲೆ ಆರೋಪ ಬಂದಿದೆ. ಹಾಗಾಗಿ ರಾಜೀನಾಮೆ ನೀಡುತ್ತೇನೆ. ಇವತ್ತು ರಾಜ್ಯಾದ್ಯಂತ ನನಗೆ ಬೆಂಬಲ ವ್ಯಕ್ತವಾಗುತ್ತಿರುವುದನ್ನು ಗಮನಿಸಿದರೆ ನಾನು ಎಷ್ಟೊಂದು ಜನರಿಗೆ ಪ್ರೀತಿ ಪಾತ್ರನಾಗಿದ್ದೇನೆ ಎಂಬ ಸಂತೃಪ್ತ ಭಾವ ಉಂಟಾಗುತ್ತಿದೆ. ನೀವು ಅಳುತ್ತಾ ನನ್ನನ್ನು ಕಳಿಸಿಕೊಡಬೇಡಿ ಎಂದು ಭಾವುಕರಾದರು.