ನವ ವಿವಾಹಿತನನ್ನು ಕೊಚ್ಚಿ ಕೊಂದ ದುಷ್ಕರ್ಮಿಗಳು | JANATA NEWS
ಬೆಳಗಾವಿ : ನವ ವಿವಾಹಿತನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನಲ್ಲಿ ನಡೆದಿದೆ.
ಕಳೆದ ಏಂಟು ತಿಂಗಳ ಹಿಂದಷ್ಟೇ ಆತ ಮದುವೆ ಆಗಿದ್ದ ವ್ಯಕ್ತಿ ಕೆಲಸಕ್ಕೆ ತೆರಳಿ ಬೈಕ್ನಲ್ಲಿ ವಾಪಸಾಗುತ್ತಿದ್ದ ವೇಳೆ ಹಿಂಬದಿಯಿಂದ ಬಂದ ದುಷ್ಕಿರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಕಾತ್ರಾಳ ಗ್ರಾಮದ ನಿವಾಸಿ ಚಿಂತಾಮಣಿ ಬಂಡಗರ (26) ಕೊಲೆಯಾದ ವ್ಯಕ್ತಿ. ಎರಡು ತಿಂಗಳ ಹಿಂದೆ ಐನಾಪುರ ಗ್ರಾಮದಲ್ಲಿ ಮೆಡಿಕಲ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾನೆ. ನಿನ್ನೆ ತಡರಾತ್ರಿ ಮೆಡಿಕಲ್ ಶಾಪ್ ಕೆಲಸ ಮುಗಿಸಿಕೊಂಡು ಐನಾಪೂರದಿಂದ ಕಾತ್ರಾಳ ಕಡೆ ವಾಪಸಾಗುತ್ತಿದ್ದರು.
ಕೆಲ ದುಷ್ಕರ್ಮಿಗಳು ಚಿಂತಾಮಣಿಯನ್ನು ಹಿಂಬಾಲಿಸಿದ್ದಾರೆ. ನಿರ್ಜನ ಪ್ರದೇಶ ಬರುತ್ತಿದ್ದಂತೆ ಹಿಂಬದಿಯಿಂದ ಬಂದ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಚಿಂತಾಮಣಿ ಮೇಲೆ ದಾಳಿ ಮಾಡಿದ್ದಾರೆ.
ದುಷ್ಕರ್ಮಿಗಳು ಮಾರಕಾಸ್ತ್ರದಿಂದ ಚಿಂತಾಮಣಿಯನ್ನು ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.