ಒಬ್ಬಳೇ ಮಹಿಳೆ ಮೋಹಕ್ಕೆ ಬಿದ್ದ ಇಬ್ಬರು ಗೆಳೆಯರು! | JANATA NEWS
ರಾಯಚೂರು : ಒಬ್ಬರಿಗೆ ಗೊತ್ತಿಲ್ಲದಂತೆ ಮತ್ತೊಬ್ಬರು ಒಬ್ಬಳೇ ಮಹಿಳೆಯ ಮೋಹಕ್ಕೆ ಬಿದ್ದಿದ್ದರು.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದಿದ್ದಿಗಿ ಬಳಿಯಯಲ್ಲಿ ವ್ಯಕ್ತಿಯೊಬ್ಬನ ಶವ ಅರೆ ಬೆಂದ ಸ್ಥಿತಿಯಲ್ಲಿ ಮೇ.9ರಂದು ಸಾರ್ವಜನಿಕರಿಗೆ ಕಂಡು ಬಂದಿತ್ತು. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಬಳಗಾನೂರು ಠಾಣೆಯ ಪೊಲೀಸರು, ವ್ಯಕ್ತಿಯ ಕೈಯಲ್ಲಿದ್ದಂತ ಉಂಗುರ, ಚಪ್ಪಲಿಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಬಸವರಾಜ್ ಎಂದು ಗುರುತಿಸಲಾಗಿದೆ. ಕೊಲೆಯಾದ ಬಸವರಾಜ್ ಹಾಗೂ ಆರೋಪಿ ಜಗದೀಶ್ ಭತ್ತ ಕಟಾವ್ ಮಾಡುವ ಯಂತ್ರದ ಚಾಲಕರಾಗಿದ್ದು, ಸಿಂಧನೂರು ತಾಲೂಕಿನ ಜವಳಗೇರಾ ಬಳಿ ಕೆಲಸ ಮಾಡಿಕೊಂಡಿದ್ದರು. ಈ ವೇಳೆ ಜಗದೀಶ್ ಹಾಗೂ ಬಸವರಾಜ್, ತಲೆಖಾನ್ ಮೂಲದ ಓರ್ವ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಕೂಡ ಹೊಂದಿದ್ದರು.
ಯಾವಾಗ ಇಬ್ಬರೂ ಒಬ್ಬಳೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ತಿಳಿಯಿತೋ ಒಬ್ಬರಿಗೊಬ್ಬರು ಕತ್ತಿ ಮಸಿಯಲು ಶುರುಮಾಡಿದ್ದರು. ಆದರೆ ಜಗದೀಶ್, ಬಸವರಾಜ್ನನ್ನು ನಿರ್ಜನ ಪ್ರದೇಶದಲ್ಲಿ ಶೇವಿಂಗ್ ಬ್ಲೇಡ್ನಿಂದ ಕತ್ತುಕೊಯ್ದು ಕೊಲೆ ಮಾಡಿ ಸುಟ್ಟು ಹಾಕಿ ಪರಾರಿಯಾಗಿದ್ದ.
ಆರೋಪಿ ಜಗದೀಶ್ನನ್ನು ಬಳಗಾನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.