ಬೈಕ್ನಲ್ಲಿ ತೆರಳುತ್ತಿದ್ದ ನಗರಸಭೆ ಸದಸ್ಯನ ಮರ್ಡರ್ | JANATA NEWS
ಹಾಸನ : ಜೆಡಿಎಸ್ ಪಕ್ಷದ ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.
ನಗರದ ಲಕ್ಷ್ಮೀಪುರಂ ಬಡಾವಣೆಯ ಜವೇನಹಳ್ಳಿ ಮಠದ ಸಮೀಪ ಬುಧವಾರ ಸಂಜೆ ಪ್ರಶಾಂಶ್ ಬೈಕ್ನಲ್ಲಿ ಬರುತ್ತಿದ್ದಾಗ ಅವರನ್ನು ಆಟೋದಲ್ಲಿ ಹಿಂಬಾಲಿಸಿ ಬಂದ ದುಷ್ಕರ್ಮಿಗಳ ತಂಡ ಅಪಘಾತ ಮಾಡಿ ಕೆಳಗೆ ಬೀಳಿಸಿದೆ.
ಬಳಿಕ ಪ್ರಶಾಂತ್ ಮೇಲೆ ಮಾರಕಾಸಗಳಿಂದ ಹಲ್ಲೆ ಮಾಡಿ ಹತ್ಯೆಗೈದಿತ್ತು. ಹಲ್ಲೆಯಿಂದ ಪ್ರಶಾಂಶ್ ಅವರ ಎರಡು ಮುಂಗೈಗಳು ತುಂಡರಿಸಿದ್ದು, ಎದೆಭಾಗಕ್ಕೆ ಹರಿತವಾದ ಆಯುಧಗಳಿಂದ ಚುಚ್ಚ್ಚಿ, ಮನಸೋ ಇಚ್ಛೆ ಹಲ್ಲೆ ಮಾಡಿ ಸ್ಥಳದಲ್ಲಿಯೇ ಕೊಚ್ಚಿ ಕೊಲೆಗೈದಿದ್ದರು.
ಪ್ರಕರಣದ ಬಳಿಕ ಜೆಡಿಎಸ್ ನಾಯಕ ಎಚ್. ಡಿ. ರೇವಣ್ಣ ಹಾಗೂ ಕಾರ್ಯಕರ್ತರು, ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಶಾಂತ್ ಹತ್ಯೆಗೆ ಪೊಲೀಸ್ ವೈಫಲ್ಯವೇ ಕಾರಣ. ಪೆನ್ಷನ್ ಮೊಹಲ್ಲಾ ಸಿಪಿಐ ಸಿಪಿಐ ರೇಣುಕಾ ಪ್ರಸಾದ್, ಡಿವೈಎಸ್ಪಿ ಉದಯ್ ಭಾಸ್ಕರ್ ಹಾಗೂ ಹಾಸನ ಗ್ರಾಮೀಣ ಠಾಣೆ ಸಿಪಿಐ ಆರೋಕಿಯಪ್ಪ ನೇರವಾಗಿ ಕೃತ್ಯಕ್ಕೆ ಕಾರಣ. ಇವರೆಲ್ಲರೂ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಸಿಪಿಐ ರೇಣುಕಾ ಪ್ರಸಾದ್ ರೌಡಿಗಳಿಗೆ ಕುಮ್ಮಕ್ಕು ನೀಡಿದ್ದಾರೆ. ಇವರನ್ನು ಕೂಡಲೇ ಕೆಲಸದಿಂದ ಅಮಾನತು ಮಾಡಬೇಕು. ಅಲ್ಲಿಯವರೆಗೂ ಜಾಗ ಬಿಟ್ಟು ಕದಲಲ್ಲ ಎಂದು ಹಾಸನ ಹಿಮ್ಸ್ ಬಳಿಯೇ ರೇವಣ್ಣ ಧರಣಿ ನಡೆಸಿದರು.
ಕೆರೆಯಲ್ಲಿ ಮೀನು ಹಿಡಿಯುವ ಕೆಲಸ ಮಾಡುತ್ತಿದ್ದ ಪೂರ್ಣಚಂದ್ರ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತನ ಪತ್ನಿಗೂ ಕೊಲೆಯಾದ ನಗರಸಭಾ ಸದಸ್ಯ ಪ್ರಶಾಂತ್ ನಾಗರಾಜ್ಗೂ ಸಂಬಂಧ ಇತ್ತು ಎನ್ನಲಾಗಿದೆ.
ಆರೋಪಿ ಪೂರ್ಣಚಂದ್ರ ತನ್ನ ಪತ್ನಿ ಹೆಸರಲ್ಲಿದ್ದ ಸೈಟ್ ಮಾರಾಟ ಮಾಡಿಸಿದ್ದು, ಈ ವಿಚಾರವಾಗಿ ಪೂರ್ಣಚಂದ್ರ ಮತ್ತು ಪ್ರಶಾಂತ್ ನಡುವೆ ವೈಮನಸ್ಸು ಏರ್ಪಟ್ಟಿತ್ತು ನಂತರ ರಾಜಿ ಪಂಚಾಯಿತಿ ನಡೆದು ತೀರ್ಮಾನ ಮಾಡಿದ ಮಾಡಿದ್ದರು ಎನ್ನಲಾಗಿದೆ.
ಹಾಸನ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.