ಮೈಸೂರಿನಲ್ಲಿ ಪಿಎಂ ಮೋದಿ ಅವರ ಊಟ - ಉಪಹಾರ ಮೆನು ಹೇಗಿದೆ ನೋಡಿ | JANATA NEWS
ಮೈಸೂರು : ರಾಜ್ಯ ಪ್ರವಾಸ ಕೈಗೊಂಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದಾರೆ. ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ಹಂತದ ಸಿದ್ಧತೆ ನಡೆದಿದ್ದು, ಎಸ್ಪಿಜಿಯಿಂದ ವೇದಿಕೆ ಭದ್ರತೆ ಪರಿಶೀಲನೆ ನಡೆಸಲಾಗಿದೆ.
ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ ನರೇಂದ್ರ ಮೋದಿ ಮೈಸೂರಿಗೆ ಆಗಮಿಸಿದ್ದು ಸುತ್ತೂರು ಶಾಖಾ ಮಠದಲ್ಲಿ ವೇದ ಪಾಠಶಾಲೆ ಕಟ್ಟಡ ಲೋಕಾರ್ಪಣೆಗೊಳಿಸಿದ್ದಾರೆ.
ಮೈಸೂರಿನ ರಾಮಸ್ವಾಮಿ ಸರ್ಕಲ್ ಮಾರ್ಗವಾಗಿ ಸುತ್ತೂರು ಮಠ ಹಾಗೂ ಚಾಮುಂಡಿ ಬೆಟ್ಟಕ್ಕೆ ಮೋದಿ ತೆರಳಲುವ ಹಿನ್ನಲೆ ರಾಮ ಸ್ವಾಮಿ ಸರ್ಕಲ್ ನಲ್ಲಿ ನೂರಾರು ಜನ ಸೇರಿದ್ದರು.
ಮೈಸೂರಿನ ರ್ಯಾಡಿಸನ್ ಹೋಟೆಲ್ನಲ್ಲಿ ತಂಗಲಿದ್ದಾರೆ. ಊಟದ ಮೆನುವಿನಲ್ಲಿ ಶುದ್ದ ಸಸ್ಯಹಾರಿ ಊಟ ಇದೆ. ಬೆಳಗ್ಗಿನ ಉಪಾಹಾರಕ್ಕೆ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ-ಸಾಂಬರ್ ಸಿದ್ದಪಡಿಸಲಾಗುತ್ತದೆ.
ಬ್ರೆಡ್ ಬಟರ್, ಮಿಕ್ಸ್ ಫ್ರೂಟ್, ಟೀ ಹಾಗೂ ಮಾರಿ ಬಿಸ್ಕಟ್ ಇದೆ. ರಾತ್ರಿಯ ಊಟಕ್ಕೆ ಕಿಚಡಿ/ಗುಜರಾತಿ ಕರಿ, ರೋಟಿ, ದಾಲ್, ರೈಸ್, ಎರಡು ರೀತಿಯ ಸಬ್ಜಿ, ಮೊಸರು, ಮಿಕ್ಸ್ ಫ್ರೂಟ್ ಒಳಗೊಂಡ ಮೆನು ತಯಾರಿಸಲಾಗುತ್ತದೆ.
ಮೈಸೂರು ಅರಮನೆಯಲ್ಲಿ ನರೇಂದ್ರ ಮೋದಿ ಅವರು ನಾಳೆ ಬೆಳಿಗ್ಗೆ ಮೈಸೂರು ರಾಜವಂಶಸ್ಥರ ಜೊತೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಲಿದ್ದಾರೆ. ಮೈಸೂರು ಶೈಲಿಯ ಇಡ್ಲಿ- ಸಾಂಬಾರ್, ಬ್ರೆಡ್ ಬಟರ್, ಮಿಕ್ಸ್ ಫ್ರಂಟ್, ಅವಲಕ್ಕಿ ಹಾಗೂ ಉಪ್ಪಿಟ್ಟಿನ ಸವಿಯನ್ನು ಉಣಬಡಿಸಲಾಗುವುದು. ಸಾಂಸ್ಕೃತಿಕ ನಗರಿ ಮೈಸೂರು ಬ್ರ್ಯಾಂಡ್ ‘ಮೈಸೂರು ಪಾಕ್’ ಕೂಡ ತಯಾರಿಸಲಾಗುತ್ತಿದೆ.