ಸ್ವಿಫ್ಟ್ ಕಾರು ಸಮುದ್ರದೊಳಕ್ಕೇ ಹೊಕ್ಕು ನಾಪತ್ತೆಯಾಗಿದ್ದ ಓರ್ವ ಇಂದು ಶವವಾಗಿ ಪತ್ತೆ | JANATA NEWS
ಉಡುಪಿ : ಕುಂದಾಪುರ ಸಮೀಪದ ಮರವಂತೆಯಲ್ಲಿ ಸ್ವಿಫ್ಟ್ ಕಾರು ಸಮುದ್ರದೊಳಕ್ಕೇ ಹೊಕ್ಕು, ಒಬ್ಬ ಸಾವಿಗೀಡಾಗಿ ಇನ್ನಿಬ್ಬರು ಗಾಯಗೊಂಡಿದ್ದ ಪ್ರಕರಣದಕ್ಕೆ ಸಂಬಂಧಿಸಿದಂತೆ ಸಮುದ್ರದಲ್ಲಿ ಕಾರಿನಲ್ಲಿದ್ದ ರೋಶನ್ ಆಚಾರ್ಯ ಶವ ಪತ್ತೆಯಾಗಿದೆ.
ಶನಿವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ ಮರವಂತೆ ಕಡಲ ತೀರದಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಸಮುದ್ರದಂಚಿನಲ್ಲಿ ಹಾಕಿದ್ದ ಕಲ್ಲುಗಳ ರಾಶಿಯನ್ನೂ ಹಾದು ಸಮುದ್ರದೊಳಕ್ಕೇ ಹೊಕ್ಕಿತ್ತು.
ಈ ಕಾರಿನಲ್ಲಿ ನಾಲ್ಕು ಜನರಿದ್ದರು, ಆ ಪೈಕಿ ಒಬ್ಬ ಸ್ಥಳದಲ್ಲೇ ಸಾವಿಗೀಡಾಗಿದ್ದ. ಕೋಟೇಶ್ವರ ಮೂಲದ ವಿರಾಜ್ ಆಚಾರ್ಯ ಅವರ ಶವ ಕಾರಿನಲ್ಲೆ ಪತ್ತೆಯಾಗಿತ್ತು. ಈತನ ಸಂಬಂಧಿಕರಾದ ಕಾರ್ತಿಕ್, ಸಂದೀಪ್ ಗಾಯಗೊಂಡಿದ್ದು, ಮತ್ತೊಬ್ಬ ಸಂಬಂಧಿ ರೋಶನ್ ಆಚಾರ್ಯ ನಾಪತ್ತೆಯಾಗಿದ್ದ.
ಇಂದು ರೋಶನ್ ಆಚಾರ್ಯ ಶವ ಕುಂದಾಪುರದ ಹೊಸಾಡು ಬಳಿಯ ಕಂಚುಗೋಡು ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.