ಮೂರು ಲಕ್ಷಕ್ಕೆ ಸುಪಾರಿ ಪಡೆದು ಕೊಲೆ ಮಾಡಿದ ಮಹಿಳೆ | JANATA NEWS
ಕಲಬುರಗಿ : ಕಲಬುರಗಿ ನಗರದ ವಾಜಪೇಯಿ ಬಡಾವಣೆಯಲ್ಲಿ ವಾರದ ಹಿಂದೆ ಭೀಕರವಾಗಿ ಕೊಲೆಯಾದ ದಯಾನಂದ್ ಲಾಡಂತಿ ಎಂಬ 26 ವರ್ಷದ ಯುವಕನ ಸಾವಿನ ರಹಸ್ಯವನ್ನು ಕೊನೆಗೂ ಪೊಲೀಸರು ಭೇದಿಸಿದ್ದಾರೆ.
ದಯಾನಂದ್ ಆಳಂದ ತಾಲೂಕಿನ ಸುಕ್ರವಾಡಿ ಗ್ರಾಮದ ನಿವಾಸಿ ಕೊಲೆಯಾದವನಾಗಿದ್ದಾನೆ. ಈತನನ್ನು ಪ್ರೇಯಸಿ ಅಂಬಿಕಾ ಆಂಡ್ ಗ್ಯಾಂಗ್ ನಿಂದ ಮೂರು ಲಕ್ಷಕ್ಕೆ ಸುಪಾರಿ ಪಡೆದು ಕೊಲೆ ಮಾಡಲಾಗಿದೆ.
ದಯಾನಂದ್ ದುಬೈನಲ್ಲಿ ಪೇಟಿಂಗ್ ಕೆಲಸ ಮಾಡುತ್ತಿದ್ದರು. ನಾಲ್ಕೈದು ತಿಂಗಳ ಹಿಂದಷ್ಟೇ ಊರಿಗೆ ಬಂದಿದ್ದರು. ಮತ್ತೆ ದುಬೈಗೆ ಹೋಗಲು ಸಿದ್ದತೆ ನಡೆಸಿದ್ದರು. ಆದರೆ ಜೂನ್ 24 ರಂದು ಪಾಸಪೋರ್ಟ್ ಕೆಲಸದ ನಿಮಿತ್ತ ಹೊರಗೆ ಹೋದಾಗ ಕೊಲೆ ಆಗಿತ್ತು. ಗ್ರಾಮದಲ್ಲಿ ಆಸ್ತಿ ವಿಚಾರವಾಗಿ ಗ್ರಾಮದವರೇ ಇಬ್ಬರು ಕೊಲೆ ಮಾಡಿದ್ದಾರೆ ಅಂತ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರು.
ಯಾದಗಿರಿ ಜಿಲ್ಲೆಯ ಕೊಡೆಕಲ್ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ, ಪ್ರಾಥಮಿಕ ಸುರಕ್ಷಾ ಅಧಿಕಾರಿ ಎಂದು ಕೆಲಸ ಮಾಡುತ್ತಿದ್ದಳು ಅಂಬಿಕಾ, ಇಪ್ಪತ್ತು ದಿನದ ಹಿಂದಷ್ಟೇ ದಯಾನಂದ್ನ ನಂಬರ್ ಪಡೆದು, ಮಿಸ್ ಕಾಲ್ ಕೊಟ್ಟು ನಂತರ ಸ್ನೇಹ ಬೆಳೆಸಿದ್ದಾಳೆ. ಜೂನ್ 24ರಂದು ದಯಾನಂದ್ಗೆ ಕಲಬುರಗಿಗೆ ಬರುವಂತೆ ಹೇಳಿದ್ದಳು.
ಕಲಬುರಗಿಗೆ ಬಂದಿದ್ದ ದಯಾನಂದ್ನನ್ನು ತನ್ನ ಸ್ಕೂಟಿ ಮೇಲೆ, ವಾಜಪೇಯಿ ಬಡಾವಣೆ ಬಳಿ ಕರೆದುಕೊಂಡು ಹೋಗಿದ್ದಳು. ಅಲ್ಲಿ ಆಟೋದಲ್ಲಿ ಬಂದಿದ್ದ ಕಲಬುರಗಿ ನಗರದ ಶಹಬಜಾರ್ ನಿವಾಸಿಗಳಾದ ಕೃಷ್ಣಾ, ನೀಲಕಂಠ, ಸುರೇಶ್, ಸಂತೋಷ್ ಅನ್ನೋರ ಮುಂದೆ ದಯಾನಂದ್ ನನ್ನು ನಿಲ್ಲಿಸಿದ್ದಳು. ಅಂಬಿಕಾಳೆ ಸ್ವತಃ ಮುಂದೆ ನಿಂತು, ದಯಾನಂದ್ನನ್ನು ಕೊಲೆ ಮಾಡಿಸಿದ್ದಾಳೆ ಎನ್ನಲಾಗಿದೆ.
ಶುಕ್ರವಾಡಿ ಗ್ರಾಮದವನೇ ಆದ ಸುನೀಲ್ ಎಂಬಾತ, ದಯಾನಂದ್ ನನ್ನು ಕೊಲೆ ಮಾಡಲು ಅಂಬಿಕಾಳಿಗೆ ಮೂರು ಲಕ್ಷಕ್ಕೆ ಸೂಪಾರಿ ನಿಡಿದ್ದನು.
ಮೂರು ಲಕ್ಷಕ್ಕೆ ಸುಪಾರಿ ಪಡೆದ ಅಂಬಿಕಾ ಮತ್ತು ಆಕೆಯ ಸಹಚರರು ದಯಾನಂದ್ನ ಕೊಲೆ ಮಾಡಿ ಅದರ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡಿದ ಬಳಿಕ ಮಿಲಿಟರಿಯಲ್ಲಿರುವ ಸುನೀಲ್ಗೆ ಕಳಿಸಿದ್ದಾಳೆ.
ಕೊಲೆಯ ಲೈವ್ ವೀಡಿಯೋ ಮಾಡಿ ತಾನು ಬಚಾವ್ ಆಗೋದಕ್ಕೆ ಪ್ಲ್ಯಾನ್ ಮಾಡಿದ್ದಳು. ಆದರೆ ಇದೀಗ ತಾನೇ ತೋಡಿದ್ದ ಅಂಬಿಕಾ ಖೆಡ್ಡಾಗೆ ತಾನೇ ಬಿದ್ದಿದ್ದಾಳೆ. ಘಟನೆ ಸಂಬಂಧ ವಿಶ್ವವಿದ್ಯಾಲಯ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.