ನನ್ನ ಹುಟ್ಟುಹಬ್ಬವನ್ನು ಸ್ನೇಹಿತರು ಆಚರಿಸಿದರೆ ಬಿಜೆಪಿಗೆ ಯಾಕೆ ಭಯ? | JANATA NEWS
ಕಲಬುರಗಿ : ನನ್ನ ಹುಟ್ಟು ಹಬ್ಬದ ಆಚರಣೆಗೆ ಲಕ್ಷಾಂತರ ಜನ ಸೇರುತ್ತಾರೆಂದು ಬಿಜೆಪಿಗೆ ಸೋಲಿನ ಭಯ ಹತ್ತಿಕೊಂಡಿದೆ. ಅದಕ್ಕಾಗಿಯೇ ನನ್ನ ಜನ್ಮದಿನದ ಬಗ್ಗೆ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು..
ಕಲಬುರಗಿಯಲ್ಲಿ ಮಾತಾಡಿದ ಅವರು, ಬಿಜೆಪಿ ಪಕ್ಷದವರು ಸಹ ಬಿ ಎಸ್ ಯಡಿಯೂರಪ್ಪನವರ 75ನೇ ಜನ್ಮದಿನೋತ್ಸವ ಆಚರಿಸಿದಾಗ ಅದು ಸರ್ಕಾರೀ ಕಾರ್ಯಕ್ರಮ ಅಲ್ಲವಾಗಿದ್ದರಿಂದ ನಾನೂ ಸಹ ಹೋಗಿದ್ದೆ. ಅವರದ್ದಾದರೆ ಸರಿ ನಮ್ಮದಾದರೆ ತಪ್ಪಾ ಎಂದು ಸಿದ್ದರಾಮಯ್ಯ ಕೇಳಿದರು.
ನನ್ನ ಹುಟ್ಟುಹಬ್ಬ ಆಚರಣೆ ಸಿದ್ದರಾಮೋತ್ಸವ ಅನ್ನೋದು ಮಾಧ್ಯಮದವರ ಸೃಷ್ಟಿ, ಅಸಲಿಗೆ ಅದು ಸಿದ್ದರಾಮಯ್ಯನವರ 75ನೇ ಅಮೃತ ಉತ್ಸವ ಅಷ್ಟೇ. ನನ್ನ ಹುಟ್ಟುಹಬ್ಬ ಆಚರಣೆ ಬಗ್ಗೆ ನಮ್ಮ ಪಕ್ಷದಲ್ಲಿ ಯಾರಿಗೂ ನಡುಕ ಇಲ್ಲ. ನಮ್ಮವರಲ್ಲಿ ಯಾಕೆ ನಡುಕ ಇರುತ್ತೆ, ಇದೆಲ್ಲಾ ಸುಳ್ಳು ಎಂದಿದ್ದಾರೆ.