ಪಾನಿಪುರಿ ತಿನ್ನಲೆಂದು ಕರೆತಂದು, ತಲೆಗೆ ಬಾಟೆಲ್ ಮತ್ತು ಕಲ್ಲಿನಿಂದ ಕೊಲೆ | JANATA NEWS
ಶಿವಮೊಗ್ಗ : ಪಾನಿಪುರಿ ತಿನ್ನಲು ಕರೆತಂದು ಯುವಕನ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಶಿವಮೊಗ್ಗದ ಗಾಡಿಕೊಪ್ಪ ಬಳಿ ನಡೆದಿದೆ.
ಹೊಸಮನೆ ಮೂರನೇ ಕ್ರಾಸ್ನ ಕಿರಣ್ ಅಲಿಯಾಸ್ ಪುಚ್ಚಿ (23) ಕೊಲೆಯಾದ ಯುವಕ. ಹೊಸಮನೆಯ ಪ್ರಜ್ವಲ್ ಮತ್ತು ಗಾಡಿಕೊಪ್ಪದ ಕಾರ್ತಿಕ್ ಕೊಲೆ ಮಾಡಿದ್ದು ವಿನೋಬನಗರ ಠಾಣೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
ಪಾನಿಪುರಿ ತಿನ್ನಲೆಂದು ಕಿರಣ್ನನ್ನು ಕಾರ್ತಿಕ್ ಮನೆಯಿಂದ ಕರೆದುಕೊಂಡು ಬಂದಿದ್ದ. ಗಾಡಿಕೊಪ್ಪದ ಗಂಧರ್ವ ಬಾರ್ ಹಿಂಭಾಗದ ಪ್ರದೇಶದಲ್ಲಿ ಮೂವರು ಯುವಕರು ಪಾರ್ಟಿ ಮಾಡಿದ್ದು, ಪಾರ್ಟಿ ನಡುವೆಯೇ ಯುವಕರು ಗಲಾಟೆ ಮಾಡಿಕೊಂಡಿದ್ದಾರೆ. ಈ ವೇಳೆ ಕಿರಣ್ ಮೇಲೆ ಪ್ರಜ್ವಲ್ ಹಾಗೂ ಕಾರ್ತಿಕ್ ಹಲ್ಲೆ ಮಾಡಿದ್ದಾರೆ. ಕಿರಣ್ ತಲೆಗೆ ಬಾಟೆಲ್ ಮತ್ತು ಕಲ್ಲಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು.. ಗಂಭೀರ ಗಾಯಗೊಂಡಿರುವ ಕಿರಣ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.