ಪತಿಯಿಂದಲೇ ಪತ್ನಿಯ ಹತ್ಯೆ, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪತಿ | JANATA NEWS
ಉತ್ತರಕನ್ನಡ : ಪತಿಯಿಂದಲೇ ಪತ್ನಿಯನ್ನು ಮಚ್ಚಿನಿಂದ ಕುತ್ತಿಗೆ ಕುಯ್ದು, ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ.
ಅಕ್ಕಮ್ಮ ಬಸವರಾಜ ಮೇಲಿನಮನೆ ಕೊಲೆಯಾದ ಮಹಿಳೆ. ಕೊಲೆಯಾದ ಮಹಿಳೆ ಪಾಳಾ ಗ್ರಾ.ಪಂ ಸದಸ್ಯೆಯಾಗಿದ್ದರು. ಮನೆಯ ಆವರಣದಲ್ಲಿಯೇ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಮೃತದೇಹದ ಸುತ್ತಲೂ ಕುಂಕುಮ ಹರಡಲಾಗಿದ್ದು, ಮನೆಯ ಒಳಗೆ ಹಾಗೂ ಹೊರಗೆ ಚುನಾವಣಾ ಕರಪತ್ರಗಳನ್ನು ಇಟ್ಟು ಅವುಗಳ ಮೇಲೆ ಹುಲ್ಲು, ಕುಂಕುಮ ಇತ್ಯಾದಿಗಳನ್ನು ಇಡಲಾಗಿದೆ.
ಕೊಲೆ ಮಾಡಿ ಆತ್ಮಹತ್ಯೆ ಯತ್ನಿಸಿ ಸಾವುನೋವಿನ ಮದ್ಯೆ ಹೋರಾಡುತ್ತಿರುವ ಪತಿರಾಯ ಬಸವರಾಜ ಹುಬ್ಬಳ್ಳಿ ಕೀಮ್ಸ್ನಲ್ಲಿ ಚಿಕಿತ್ಸೆ ನೀಡಲಾಗಿದೆ.
ಮುಂಡಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
RELATED TOPICS:
English summary :Murder of wife by husband, husband tried to commit suicide by consuming poison