ರಾಮಜನ್ಮ ಭೂಮಿಯ ಶಿಲಾನ್ಯಾಸ ನಡೆದ ದಿನವನ್ನು ವಿರೋಧಿಸಿ ಕಾಂಗ್ರೆಸ್ ನಿಂದ ಕಪ್ಪು ದಿನ ಪ್ರದರ್ಶನ - ಅಮಿತ್ ಷಾ | JANATA NEWS
ನವದೆಹಲಿ : ಶ್ರೀ ರಾಮಜನ್ಮಭೂಮಿ ಶಿಲಾನ್ಯಾಸ ನಡೆದ ಇವತ್ತಿನ ದಿನವನ್ನೇ ಕಪ್ಪು ಬಟ್ಟೆ ಧರಿಸಿ ವಿರೋಧ ಪ್ರದರ್ಶಿಸಲು ಆಯ್ಕೆ ಮಾಡಿರುವ ಕಾಂಗ್ರೆಸ್ ಪಕ್ಷ, "ತನ್ನ ಓಲೈಕೆ ನೀತಿಯನ್ನು ಮುಂಡುವರೆಸುವ ಸಂದೇಶ ನೀಡಿದೆ", ಎಂದು ಕೇಂದ್ರ ಗೃಹಮಂತ್ರಿ ಅಮಿತ್ ಷಾ ಹೇಳಿದ್ದಾರೆ.
ಮಾಧ್ಯಮ ದೊಂದಿದೆ ಮಾತನಾಡಿದ ಅಮಿತ್ ಷಾ ಅವರು, "ನನಗೆ ಅನಿಸುತ್ತದೆ ಒಂದು ಜವಾಬ್ದಾರಿಯುತ ಪಕ್ಷದ ಪಕ್ಷವಾಗಿ ಕಾನೂನು ಕ್ರಮಗಳಿಗೆ ಸಹಕರಿಸಬೇಕಾಗಿತ್ತು. ಈಗ ಕೋರ್ಟ್ ನಲ್ಲಿ ನೊಂದಣಿಯಾದ ಎಫ್ಐಆರ್ ಆಧಾರಿಸಿ ತನಿಖೆ ನಡೆಯುತ್ತಿದೆ. ಅವರು ಪ್ರತಿದಿನ ಪ್ರತಿಭಟನೆ ನಡೆಸುತ್ತಾರೆ, ಆದರೆ ಇಂದಿನ ದಿನ ವಿಶೇಷವಾಗಿ ಕಪ್ಪು ಬಟ್ಟೆಯನ್ನು ಧರಿಸಿದ್ದು ಓಲೈಕೆಯ ರಾಜಕೀಯದ ಭಾಗವಾಗಿದೆ, ಎಂಬುದು ನನ್ನ ಸ್ಪಷ್ಟ ನಂಬಿಕೆಯಾಗಿದೆ", ಎಂದಿದ್ದಾರೆ.
"ಕಾಂಗ್ರೆಸ್ ತನ್ನ ಓಲೈಕೆ ನೀತಿಯನ್ನು ಗುಪ್ತವಾಗಿ ಮುಂದುವರಿಸಿಕೊಂಡು ಹೋಗುತ್ತಿದೆ. ಇವತ್ತು ಇಡಿ(ಜಾರಿ ನಿರ್ದೇಶನಾಲಯ) ಯಾವುದೇ ರೀತಿಯ ವಿಚಾರಣೆ ಅಥವಾ ತನಿಖೆ ಅಥವಾ ಸಮನ್ಸ್ ಅಥವಾ ರೈಡ್ ಮಾಡಿಲ್ಲ. ಆದರೂ ಇವತ್ತು ಕಾಂಗ್ರೆಸ್ ವಿರೋಧ ಪ್ರದರ್ಶನ ಮಾಡಿದೆ. ಇಲ್ಲಿಯವರೆಗೆ ವಿರೋಧ ಪ್ರತಿಭಟನೆಯಲ್ಲಿ ಇವರು ಅವರವರ ಪೋಷಾಕು ಗಳಲ್ಲಿ ಇರುತ್ತಿದ್ದರು, ಆದರೆ ಇಂದು ಕಪ್ಪು ಬಟ್ಟೆಯನ್ನು ಧರಿಸಿದ್ದಾರೆ, ಎಂದು ಒತ್ತಿಹೇಳಿದ್ದಾರೆ.
"ನನಗನಿಸುತ್ತದೆ, ಇದೇ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ರಾಮಜನ್ಮಭೂಮಿಯಲ್ಲಿ ಶಿಲಾನ್ಯಾಸ ಮಾಡಿದ್ದರು. ಕಳೆದ 550 ವರ್ಷಗಳ ಹಿಂದಿನ ಸಮಸ್ಯೆಗೆ, ಶಾಂತಿ ಪೂರ್ವಕವಾಗಿ ಪರಿಹಾರ ನೀಡಲಾಗಿತ್ತು. ಕಾಂಗ್ರೆಸ್ ಪಕ್ಷ ಇದೇ ದಿನದಂದು ದಿನವನ್ನು ಪ್ರತಿಭಟನೆಗೆ, ಅದರಲ್ಲೂ ವಿಶೇಷವಾಗಿ ಕಪ್ಪುಬಟ್ಟೆ ಧರಿಸಿ ವಿರೋಧವನ್ನು ಪ್ರದರ್ಶಿಸಲು ಆಯ್ಕೆ ಮಾಡಿದೆ. ಏಕೆಂದರೆ ಅವರು ಒಂದು ಸೂಕ್ಷ್ಮ ಸಂದೇಶ ನೀಡಲು ಬಯಸುತ್ತಾರೆ. ಅದೇನೆಂದರೆ, ಅವರು ತಾವು ರಾಮಜನ್ಮ ಭೂಮಿಯ ಶಿಲಾನ್ಯಾಸದ ವಿರೋಧ ಮಾಡುತ್ತೇವೆ ಮತ್ತು ತಮ್ಮ ತುಷ್ಟೀಕರಣ ನೀತಿಯನ್ನು ಮುಂದುವರಿಸಲು ಇಚ್ಚಿಸುತ್ತಾರೆ. ನಾನು ಹೇಳಲು ಬಯಸುತ್ತೇನೆ ತುಷ್ಟೀಕರಣದ ನೀತಿ ದೇಶಕ್ಕೂ ಒಳ್ಳೆಯದಲ್ಲ ಕಾಂಗ್ರೆಸ್ಸಿಗೂ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯದಲ್ಲ ಪ್ರಕರಣದ ನೀತಿಯ ಕಾರಣವೇ ಕಾಂಗ್ರೆಸ್ಸಿಗೆ ಈ ಸ್ಥಿತಿಗೆ ಬಂದಿದೆ", ಎಂದು ಹೇಳಿದ್ದಾರೆ.