ಪೆಟ್ರೋಲ್ ಸುರಿದುಕೊಂಡು ಮುರುಘಾ ಶರಣರ ಶಿಷ್ಯನಿಂದ ಆತ್ಮಹತ್ಯೆ ಯತ್ನ | JANATA NEWS
ಚಿತ್ರದುರ್ಗ : ಅತ್ಯಾಚಾರ ಕೇಸ್ ಹಿನ್ನೆಲೆ ಯಲ್ಲಿ ಬಂಧಿತರಾಗಿರುವ ಮುರುಘಾ ಮಠದ ಸ್ವಾಮೀಜಿಯನ್ನು ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ.
ಕೋರ್ಟ್ ಮುರುಘಾ ಸ್ವಾಮೀಜಿಯನ್ನು ಕಸ್ಟಡಿಗೊಪ್ಪಿಸಿದ ಬಳಿಕ ಚಿತ್ರದುರ್ಗದ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಯ್ತು. ಈ ವೇಳೆ ತಿಪ್ಪೇರುದ್ರಸ್ವಾಮಿ ಹೈಡ್ರಾಮಾ ಮಾಡಿದ್ದಾನೆ.
ಭಕ್ತನೊಬ್ಬ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಮುಂಭಾಗ ಹೈಡ್ರಾಮಾ ಮಾಡಿದ್ದಾನೆ. ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾನೆ. ಆತನನ್ನು ತಿಪ್ಪೇರುದ್ರಸ್ವಾಮಿ ಅಂತಾ ಗುರುತಿಸಲಾಗಿದೆ.
ಪೆಟ್ರೋಲ್ ಸುರಿದುಕೊಂಡು ತಿಪ್ಪೇರುದ್ರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮುರುಘಾ ಸ್ವಾಮೀಜಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.