50 ಲಕ್ಷ ನಗದು, 1 ಕೆಜಿ ಚಿನ್ನ, ಅರ್ಧ ಕೆಜಿ ಬೆಳ್ಳಿ ಕೊಟ್ಟು ಅದ್ಧೂರಿ ಮದ್ವೆ, ಎರಡೇ ತಿಂಗ್ಳಲ್ಲಿ ವೈದ್ಯೆಗೆ ಶಾಕ್! | JANATA NEWS
ಬಳ್ಳಾರಿ : ಹೈದರಾಬಾದ್ ಮೂಲದ ವೈದ್ಯೆಗೆ ಮೋಸ ಮಾಡಿ ಮದುವೆಯಾದ ಬಳ್ಳಾರಿ ಮೂಲದ ಇಂಜಿನಿಯರ್, ಇದೀಗ ಮತ್ತೊಂದು ಮದುವೆ ಆಗುವ ಮೂಲಕ ವೈದ್ಯೆಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಬಳ್ಳಾರಿ ಮೂಲದ ರಘುರಾಮ್ ಎಂಬಾತ ಅಮೇರಿಕಾದಲ್ಲಿದ್ದಾನೆ. ಸಂಬಂಧ ಚೆನ್ನಾಗಿದೆ ಎಂಬುದಾಗಿ ನಿಶ್ಚಯಿಸಿ, ರಘುರಾಮ್ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ, ಹೈದರಾಬಾದ್ ಮೂಲದ ವೈದ್ಯೆ ಮೌನಿಕಾ ಕುಟುಂಬಸ್ಥರು ಅವರು ಬಳ್ಳಾರಿ ಮೂಲದ ಇಂಜಿನಿಯರ್ ರಘುರಾಮ ರೆಡ್ಡಿ ಜೊತೆ 2019ರಲ್ಲಿ ಮದುವೆ ಆಗಿದ್ದರು.
ಆಸ್ಟ್ರೇಲಿಯಾದಲ್ಲಿ ಕೆಲಸ ಮಾಡುತ್ತಿರುದಾಗಿ ಸುಳ್ಳು ಹೇಳಿ 50 ಲಕ್ಷ ನಗದು, ಒಂದು ಕೆಜಿ ಬಂಗಾರ ಹಾಗೂ ಅರ್ಧ ಕೆಜಿ ಬೆಳ್ಳಿಯನ್ನು ರುಘುರಾಮ್ ವರದಕ್ಷಿಣೆ ಪಡೆದುಕೊಂಡಿದ್ದ. ಮದುವೆಯಾದ ನಂತ್ರ ಅಮೇರಿಕಾಗೆ ಕೆಲಸದಲ್ಲಿದ್ದೇನೆ ಎಂದು ಹೇಳಿದ್ದಂತ ರಘುರಾಮ್ ಹೋಗಿಲ್ಲ. ಯಾವಾಗ ಹೋಗೋದು ಎಂಬುದಾಗಿ ಕೇಳಿದಂತ ಪತ್ನಿ ಮೌನಿಕಾ, ಅವರ ಪೋಷಕರಿಗೂ ಸರಿಯಾಗಿ ಉತ್ತರಿಸಿಲ್ಲ. ಮದುವೆಯಾಗಿ ಎರಡು ತಿಂಗಳು ಕಳೆಯುತ್ತಿದ್ದಂತೇ, ಮತ್ತಷ್ಟು ವರದಕ್ಷಿಣೆಗಾಗಿ ರಘುರಾಮ್ ಹಾಗೂ ಕುಟುಂಬಸ್ಥರಿಂದ ವೈದ್ಯೆ ಮೌನಿಕಾಗೆ ಕಿರುಕುಳ ಹೆಚ್ಚಾಗಿದೆ.
ರಘುರಾಮನ ಕಾಟ ಸಹಿಸಲಾರದೆ ಮೋನಿಕಾ ಮನೆಯಿಂದ ಹೊರ ಬಂದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು ಆತನಾಗಲಿ ಅಥವಾ ಕುಟುಬಂಸ್ಥರಾಗಲಿ ತಲೆ ಕೆಡಿಸಿಕೊಂಡಿರಲಿಲ್ಲ.. ಇತ್ತ ಮೊದಲನೇ ಹೆಂಡ್ತಿಗೆ ಗೊತ್ತಾಗದೇ ಎರಡನೇ ಮದುವೆಯಾಗಿ ವಂಚನೆ ಮಾಡಿದ್ದಾನೆ.
ಎರಡನೇ ಮದುವೆ ವಿಷಯ ಗೊತ್ತಾಗಿ, ರಘುರಾಮನ ಮನೆಗೆ ವೈದ್ಯೆ ಹಾಗೂ ಕುಟುಂಬಸ್ಥರು ಹೋದಾಗ ಅವರ ಮೇಲೆ ಆತ ಮತ್ತು ಆತನ ಕುಟುಂಬ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ, ಕೊಲೆ ಬೆದರಿಕೆ ಹಾಕಿದ್ದಾರೆ. ವೈದ್ಯೆ ಹಾಗೂ ಕುಟುಂಬಸ್ಥರಿಗೆ ಮುಖ, ಕೈ-ಕಾಲುಗಳಲ್ಲಿ ರಕ್ತ ಬರುವಂತೆ ಹಲ್ಲೆ ನಡೆಸಿದ್ದಾರೆ.
ಇದೀಗ ವೈದ್ಯೆ ನೀಡಿದ ದೂರಿನನ್ವಯ ಮೌನಿಕಾ ಗಂಡ ರಘುರಾಮ ರೆಡ್ಡಿ, ತಂದೆ ನಾಗೀರೆಡ್ಡಿ ಹಾಗೂ ಸಹೋದರ ಹರೀಶ್ ರೆಡ್ಡಿಯನ್ನು ಬಂಧಿಸಲಾಗಿದೆ. ಇವರಲ್ಲದೇ 7 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಇನ್ನುಳಿದವರು ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಪತ್ತೆಗಾಗಿ ಬಲೆ ಬೀಸಿದ್ದಾರೆ.