ಒತ್ತುವರಿ ತೆರವು ಕಾರ್ಯ ವಿಚಾರದಲ್ಲೂ ರಾಜಕಾರಣ ಮಾಡಲಾಗುತ್ತಿದೆ, ಒತ್ತುವರಿ ತೆರವಿಗೆ ಕಾಂಗ್ರೆಸ್ನವರು ಬಿಡುತ್ತಿಲ್ಲ: ಸಚಿವ ಆರ್.ಅಶೋಕ್ ಕಿಡಿ | JANATA NEWS
ಮೈಸೂರು : ರಾಜಕಾಲುವೆ ಒತ್ತುವರಿ ತೆರವಿಗೆ ಕಾಂಗ್ರೆಸ್ ಬಿಡ್ತಿಲ್ಲ, ಒತ್ತುವರಿ ತೆರವು ಕಾರ್ಯದಲ್ಲೂ ರಾಜಕೀಯ ಮಾಡುತ್ತಿದ್ಧಾರೆ. ಬಡವರು ಅಂತ ನಾವು ಒತ್ತುವರಿ ಕೆಲಸ ನಿಲ್ಲಿಸುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.
ಮೈಸೂರಲ್ಲಿ ಮಾತಾಡಿದ ಅವರು, ಸದ್ಯ ಬೆಂಗಳೂರಿನ 2 ವಲಯದಲ್ಲಿ ಒತ್ತುವರಿ ತೆರವು ಕಾರ್ಯ ನಡೆಸಲಾಗುತ್ತದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನೆಲ್ಲೆಡೆ ತೆರವು ಕಾರ್ಯಾಚರಣೆ ಮಾಡಲಾಗುವುದು. ಬಡವರು ಮಾಡಿರುವ ಒತ್ತುವರಿ ತೆರವು ಮಾಡಲು ಮಾಧ್ಯಮದವರು ಬಿಡುತ್ತಿಲ್ಲ. ಶ್ರೀಮಂತರು ಮಾಡಿರುವ ಒತ್ತುವರಿ ತೆರವಿಗೆ ಕಾಂಗ್ರೆಸ್ನವರು ಬಿಡುತ್ತಿಲ್ಲ. ಬಡವರು, ಶ್ರೀಮಂತರು ಎನ್ನದೇ ಎಲ್ಲಾ ಒತ್ತುವರಿ ತೆರವು ಮಾಡಲಾಗುತ್ತಿದೆ ಎಂದು ಹೇಳಿದರು.
ಬಡವರಿಗೆ ನೆರವು ನೀಡುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು. ಒತ್ತುವರಿ ತೆರವು ಕಾರ್ಯ ವಿಚಾರದಲ್ಲೂ ರಾಜಕಾರಣ ಮಾಡಲಾಗುತ್ತಿದೆ. ಬಡವರು ಎಂಬ ಕಾರಣಕ್ಕೆ ಒತ್ತುವರಿ ತೆರವು ನಿಲ್ಲಿಸಲು ಸಾಧ್ಯವಿಲ್ಲ. ಬೇರೆ ಎಲ್ಲಾ ಕಡೆಯು ತೆರವುಗೊಳಿಸಿ ಬಡವರು ಎಂದು ಬಿಡಲು ಆಗುವುದಿಲ್ಲ. ರಾಜಕಾರಣಿಗಳು, ಬಡವರು, ಶ್ರೀಮಂತರೇ ಇರಲಿ, ಒತ್ತುವರಿ ತೆರವು ನಿಶ್ಚಿತ ಎಂದು ಆರ್.ಅಶೋಕ್ ಸ್ಪಷ್ಟಪಡಿಸಿದರು.