ಕಟೀಲ್ ಒಬ್ಬ ವಿದೂಷಕ,ಪಾಪ ಅವರಿಗಿನ್ನೂ ಮೆಚ್ಯೂರಿಟಿ ಇಲ್ಲ! | JANATA NEWS
ಬಾಗಲಕೋಟೆ : ನಳೀನ್ ಕುಮಾರ್ ಕಟೀಲ್ ಒಬ್ಬ ವಿದೂಷಕ, ಪಾಪ ಅವರಿಗಿನ್ನೂ ಮೆಚ್ಯೂರಿಟಿ ಇಲ್ಲ ಎಂದು ನಳಿನ್ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಆರ್ಕಾವತಿ ವಿಚಾರ, ಲೋಕಾಯುಕ್ತ ಬಂದ್ ಮಾಡದಿದ್ದರೇ ಸಿದ್ದರಾಮಯ್ಯ ಜೈಲಿಗೆ ಹೋಗ್ತಿದ್ರು ಎಂಬ ಕಟೀಲ್ ಹೇಳಿಕೆಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕಟೀಲು ಒಬ್ಬ ವಿದೂಷಕ, ಪಾಪ ಅವರಿಗೆ ಮೆಚ್ಯೂರಿಟಿ ಇಲ್ಲ. ನಮ್ಮ ಸರ್ಕಾರ ಹೋಗಿ ಎಷ್ಟು ದಿನ ಆಯ್ತು? ಈಗ ಯಾವ ಸರ್ಕಾರ ಇದೆ? ಮೂರು ವರ್ಷದಿಂದ ಯಾರು ಅಧಿಕಾರದಲ್ಲಿದ್ದಾರೆ? ನಾವು ಅಧಿಕಾರದಲ್ಲಿದ್ದಾಗ ವಿರೋಧ ಪಕ್ಷದಲ್ಲಿದ್ದವರು ಯಾರು? ಎಂಬುದಿನ್ನೂ ಗೊತ್ತಿಲ್ಲವೆನ್ನುವಂತೆ ಕಾಣುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ಬಿಜೆಪಿ ವಿರೋಧ ಪಕ್ಷದಲ್ಲಿದ್ದಾಗ ಯಾಕೆ ಇವೆಲ್ಲಾ ರೈಜ್ ಮಾಡಲಿಲ್ಲ? ಆಗ ಬಾಯಿಗೇನು ಕಡುಬು ಸಿಕ್ಕಿಸಿಕೊಂಡಿದ್ರಾ? ನಾವು ಭ್ರಷ್ಟಾಚಾರ ಆರೋಪ ಮಾಡೋಕೆ ಶುರು ಮಾಡಿದ ಮೇಲೆ ಹೀಗೆಲ್ಲಾ ಮಾತಾಡ್ತಿದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
40 ಪರ್ಸೆಂಟ್ ಸರ್ಕಾರ ಅಂತ ಸುಮ್ಮನೆ ಆರೋಪ ಮಾಡ್ತಾ ಇಲ್ಲ. ನರೇಂದ್ರ ಮೋದಿ ಬಂದು ನನಗೆ 10 ಪರ್ಸೆಂಟ್ ಸರ್ಕಾರ ಅಂದ್ರಲ್ಲ. ಆಗ ಯಾವ ದಾಖಲಾತಿ ಕೊಟ್ಟಿದ್ದೀರಪ್ಪಾ? 2018ರಲ್ಲಿ ನನ್ನ ವಿರುದ್ಧ ಆರೋಪ ಮಾಡಿದಾಗ ಯಾವ ದಾಖಲಾತಿ ಕೊಟ್ಟಿದ್ದರು? ಆವಾಗ ಕಟೀಲು ಎಲ್ಲಿದ್ದರು? ಯಡಿಯೂರಪ್ಪ ಅಧ್ಯಕ್ಷರಾಗಿದ್ದರು ಅಲ್ವಾ? ನರೇಂದ್ರ ಮೋದಿ ಕಡೆಯಿಂದ ಅವರೇ ಹೇಳಿಸಿದ್ದು ಅಲ್ವಾ? ಎಂದರು