ಡ್ಯಾಂನಲ್ಲಿ ವಿಡಿಯೋ ಮಾಡಲು ಹೋಗಿ ಇಬ್ಬರು ಯುವಕರು ನೀರುಪಾಲು | JANATA NEWS
ದಾವಣಗೆರೆ : ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕಿನ ಹರಗನಹಳ್ಳಿಯಲ್ಲಿರುವ ಡ್ಯಾಮ ನಲ್ಲಿ ಇಬ್ಬರು ಯುವಕರು ಇಲ್ಲಿ ವಿಡಿಯೋ ಮಾಡಲು ಹೋಗು ನೀರು ಪಾಲಾಗಿದ್ದಾರೆ.
ಹರಿಹರ ಆಶ್ರಯ ಬಡಾವಣೆಯ ಪವನ್ (25), ಪ್ರಕಾಶ್ (24) ನೀರುಪಾಲಾದ ಸ್ನೇಹಿತರು. ಮೊದಲು 24 ವರ್ಷದ ಪ್ರಕಾಶ್ ಎಂಬ ಯುವಕ ರೀಲ್ಸ್ ಮಾಡುವ ಭರದಲ್ಲಿ ಡ್ಯಾಮ್ ಮೇಲಿಂದ ನೀರಿಗೆ ಬಿದ್ದಿದ್ದಾನೆ. ಅವನನ್ನು ಉಳಿಸಲು ನೀರಿಗೆ ಧುಮಕಿದ 25 ವರ್ಷ ಪವನ್ ಸಹ ಪ್ರಕಾಶ್ ನೊಂದಿಗೆ ನೀರಿನಲ್ಲಿ ಬಿದ್ದಿದ್ದಾನೆ. ಈ ವೇಳೆ ನೀರಿನ ರಭಸಕ್ಕೆ ಪವನ್ ಕೂಡ ಮುಳುಗಿದ್ದಾನೆ.
ಈ ಪೈಕಿ ಹರಿಹರದ ರಾಘವೇಂದ್ರ ಮಠದ ಬಳಿ ಓರ್ವನ ಮೃತ ದೇಹ ಪತ್ತೆಯಾಗಿದೆ. ನೀರಿನಲ್ಲಿ ಮುಳುತ್ತಿದ್ದನ್ನು ನೋಡಿದ ಮತ್ತೊಬ್ಬ ಸ್ನೇಹಿತ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾನೆ. ಮತ್ತೋರ್ವನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.