ನಿಮ್ಗೆ ಎಷ್ಟು ಮದುವೆಯಾಗಿದೆ? ಯಾರೊಂದಿಗೆ ವಿಚ್ಛೇದನ ಆಗಿದೆ? ಸದ್ಯ ಯಾರ ಜೊತೆ ಸಂಸಾರ ಮಾಡ್ತಿದ್ದೀರಿ? | JANATA NEWS
ಕೋಲಾರ : ಮಹಿಳಾ ತಹಸೀಲ್ದಾರ್ ಅವರ ವೈಯಕ್ತಿಯ ಜೀವನದ ಬಗ್ಗೆ ಮಾಹಿತಿ ಕೇಳಿ ಆರ್ಟಿಐ (RTI) ಕಾರ್ಯಕರ್ತನೊಬ್ಬ ಜೈಲು ಸೇರಿರುವ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಂಡಿಕಲ್ ನಾಗರಾಜ್ ಬಂಧಿತ ಆರ್ಟಿಐ ಕಾರ್ಯಕರ್ತ. ಈತ ಮುಳಬಾಗಿಲು ತಹಶೀಲ್ದಾರ್ ಶೋಭಿತಾ ಅವರ ವೈಯಕ್ತಿಕ ವಿಚಾರಗಳ ಕುರಿತು ಆರ್ಟಿಐ ಅಡಿ ಮಾಹಿತಿ ಕೇಳಿದ್ದ.
ಯಾರೊಂದಿಗೆ ಡಿವೋರ್ಸ್ ಆಗಿದೆ? ಡಿವೋರ್ಸ್ ಆಗಿದ್ದರೆ ಯಾವ ಕಾರಣಕ್ಕೆ ಆಯ್ತು? ಯಾರಿಗೆಲ್ಲಾ ಇನ್ನೂ ಡಿವೋರ್ಸ್ ಆಗಿಲ್ಲ? ಅವರಿಂದ ಗಂಡಂದಿರು ದೂರವಾಗಲು ಕಾರಣ ಏನು? ಅವರ ಗಂಡಂದಿರು ಯಾವ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ? ಸದ್ಯ ಯಾರ ಜತೆ ಮಹಿಳಾ ಅಧಿಕಾರಿ ಸಂಸಾರ ಮಾಡುತ್ತಿದ್ದಾರೆ. ಮದ್ವೆ ಮಾಡಿಕೊಂಡದ್ದು ಎಲ್ಲಿ? ಲಗ್ನ ಪತ್ರಿಕೆಗಳು, ಕಲ್ಯಾಣ ಮಂಟಪಗಳ ವಿವರ ಕೊಡಿ ಎಂದು ಕೇಳಿದ್ದ.
ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ಆರ್ಟಿಐ ಕಾರ್ಯಕರ್ತ ನಾಗರಾಜ್ನನ್ನು ಇದೀಗ ಮುಳಬಾಗಿಲು ನಗರ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.