ಜಾಮೀನಿನ ಮೇಲೆ ಹೊರಗೆ ಇರುವ ಪಾರ್ಟಿಯಿಂದ ನಾವೇನು ನೈತಿಕ ಪಾಠ ಕಲಿಯಬೇಕಾಗಿಲ್ಲ - ಸಿಎಂ ಬೊಮ್ಮಾಯಿ | JANATA NEWS
ಬೆಂಗಳೂರು : ಇಂದು ಗಾಂಧಿ ಜಯಂತಿ, ನಕಲಿ ಗಾಂಧಿಗಳ ಬಗ್ಗೆ ನಾನೇಕೆ ಮಾತನಾಡಬೇಕು? ಇಡೀ ಕಾಂಗ್ರೆಸ್ ಪಕ್ಷ ಜಾಮೀನಿನ ಮೇಲೆ ಹೊರಗಿದೆ- ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಡಿ.ಕೆ.ಶಿವಕುಮಾರ್ ಜಾಮೀನಿನ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ಪಾಲಿಗೆ ಕರ್ನಾಟಕ ಎಟಿಎಂ ಆಗಿತ್ತು, ಈಗ ಅದು ಇಲ್ಲವಾಗಿದೆ, ಎಂದು ಸಿಎಂ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದರು
ಭಾರತ್ ಜೋಡೋ ಯಾತ್ರೆಗೆ ಜನಸಾಮಾನ್ಯರಿಂದ ಯಾವುದೇ ಸ್ಪಂದನೆ ಇಲ್ಲ. ಪ್ರಯಾಸದಿಂದ ನಾನಾ ಭಾಗಗಳಿಂದ ಜನರನ್ನು ಕರೆತಂದು ಯಾತ್ರೆಗೆ ಸೇರಿಸುತ್ತಿದ್ದಾರೆ, ಪ್ರದರ್ಶಿಸುತ್ತಿದ್ದಾರೆ. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ರಾಹುಲ್ ಗಾಂಧಿ ಮುಂತಾದವರು ಮಾಡುತ್ತಿರುವ ಶೋ ಇದು, ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಅವರು ಪ್ರತಿಕ್ರಿಯೆ ನೀಡುತ್ತಿದ್ದರು.
ಪ್ರತಿಕ್ರಿಯೆ ಜನಸಾಮಾನ್ಯರಿಂದ ಬರ್ತಾ ಇಲ್ಲ ಕಷ್ಟಪಟ್ಟು ಬೇರೆ ಬೇರೆ ತಾಲೂಕಿನಿಂದ ಜನಗಳನ್ನು ತಂದು ಜನಪ್ರದರ್ಶನ ಮಾಡುತ್ತಿರುವುದು ಸ್ಪಷ್ಟವಾಗಿದೆ ಮತ್ತು ಪಾದಯಾತ್ರೆ ಮಾಡುವವರ ಸಂಖ್ಯೆ ತುಂಬಾ ಕಡಿಮೆ. ನಿನ್ನೆ ಮತ್ತು ಇವತ್ತು ರಾಜ್ಯದ ಬಗ್ಗೆ ಹಲವಾರು ಮಾತಾಡಿದ್ದಾರೆ. ನಾನು ಸಣ್ಣ ರಾಜಕೀಯ ಮಾಡಲು ಬಯಸುವುದಿಲ್ಲ. ಅವರು ಪಾದಯಾತ್ರೆ ಮಾಡಿಕೊಂಡು ಹೋಗಲಿ, ಜನತೀರ್ಮಾನ ಮಾಡುತ್ತಾರೆ. ಆದರೆ ಕಿಳು ಮಟ್ಟದ ಮಾತಾಡುವುದು, ಅಧಿಕಾರಿಗಳಿಗೆ ಹೆದರಿಸುವುದು ಮಾಡಬಾರದು. ಅದು ಯಾವುದು ನಡೆಯುವುದಿಲ್ಲ, ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಅವರು(ಅಧಿಕಾರಿಗಳು) ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ.
ಅಲ್ಲದೆ, ಅವರು ಇಲ್ಲಿಯ ಭ್ರಷ್ಟಾಚಾರ ಇದೆ ಎಂದು ಮಾತನಾಡುತ್ತಾರೆ. ರಾಹುಲ್ ಗಾಂಧಿ ಸ್ವತಃ ಬೆಲ್ ಮೇಲಿದ್ದಾರೆ. ಅವರ ಹಿಂದಿನ ಅಧ್ಯಕ್ಷರು ಶ್ರೀಮತಿ ಸೋನಿಯಾ ಗಾಂಧೀಜಿ ಅವರು ಬೇಲ್ ಮೇಲೆ ಇದ್ದಾರೆ, ಅಧ್ಯಕ್ಷರು ಬೇಲ್ ಮೇಲೆ ಇದ್ದಾರೆ. ಬೇಲ್ ಮೇಲೆ ಇರುವ ಪಾರ್ಟಿಯಿಂದ ನಾವೇನು ನೈತಿಕ ಪಾಠ ಕಲಿಯಬೇಕಾಗಿಲ್ಲ. ಭಾರತದ ಜನತೆ ಈಗಾಗಲೇ ತೀರ್ಮಾನ ಮಾಡಿದ್ದಾರೆ, ಆಗಲೇ ತಿರಸ್ಕಾರವನ್ನು ಮಾಡಿದ್ದಾರೆ. ಬರುವ 23ರ ಚುನಾವಣೆಯಲ್ಲಿ ಕೂಡ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ. ನಿನ್ನೆ ಸಿದ್ದರಾಮಯ್ಯ ಅವರು ಹೇಳುತ್ತಿದ್ದರು, ತಾವು ಆರು ತಿಂಗಳ ನಂತರ ಅಧಿಕಾರಕ್ಕೆ ಬರುತ್ತೇವೆ, ಎಂದು. ಅದು ಕನಸು ಕನಸಾಗೇ ಉಳಿಯುತ್ತದೆ ಮುಂದೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದು ಕನಸಿನ ಮಾತು, ಎಂದು ಸಿಎಂ ಬೊಮ್ಮಯಿ ಹೇಳಿದ್ದಾರೆ.